ಸಿಬ್ಬಂದಿ ಮುಷ್ಕರ: ದಾವಣಗೆರೆಯಲ್ಲಿ ಕೆಎಸ್​ಆರ್​​ಟಿಸಿ ಬಸ್​ ಸಂಚಾರ ಸ್ತಬ್ಧ

By

Published : Apr 7, 2021, 12:09 PM IST

thumbnail
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯದಲ್ಲಿ ಸಾರಿಗೆ ನೌಕರರು ಅನಿರ್ದಿಷ್ಟವಾಗಿ ಮುಷ್ಕರ ಹಮ್ಮಿಕೊಂಡಿದ್ದು, ದಾವಣಗೆರೆಯ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಸಂಪೂರ್ಣವಾಗಿ ಖಾಲಿ-ಖಾಲಿಯಾಗಿದೆ. ಸರ್ಕಾರಿ ಬಸ್​ಗಳು ಇಲ್ಲದೆ ಹಿನ್ನೆಲೆ ಬೆರಳೆಣಿಕೆಯಷ್ಟು ಪ್ರಯಾಣಿಕರು ಖಾಸಗಿ ಬಸ್​ಗಳ ಮೊರೆ ಹೋಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಾರಿಗೆ ಬಸ್ ಸಂಚಾರ ನಡೆಸೋದಿಲ್ಲ ಎಂದು ನೌಕರರ ಪಟ್ಟು ಹಿಡಿದಿದ್ದು, ದಾವಣಗೆರೆ ಡಿಪೋಗೆ ಸೇರಿದ 262 ಸಾಮಾನ್ಯ ಸಾರಿಗೆ ಬಸ್, 102 ವೇಗಧೂತ ಬಸ್ ಸೇರಿದಂತೆ 40 ನಗರ ಸಾರಿಗೆ ಬಸ್​ಗಳು ರಸ್ತೆಗಿಳಿದಿಲ್ಲ. ಈ ಕುರಿತ ವಿಸ್ತೃತವಾದ ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.