ಮಲೆನಾಡಿನ ಮಹಾಮಳೆಗೆ ಕುಸಿದ ದೇವಗಂಗೆ ತಡೆಗೋಡೆ: ಪರಿಸರವಾದಿಗಳ ಆತಂಕ - ದೇವಗಂಗೆ ಕೊಳದ ತಡೆಗೋಡೆ ಕುಸಿತ

🎬 Watch Now: Feature Video

thumbnail

By

Published : Oct 16, 2020, 12:58 PM IST

ಶಿವಮೊಗ್ಗ: ಜಿಲ್ಲೆಯ ನಗರ ಸಮೀಪವಿರುವ ದೇವಗಂಗೆ ಕೊಳದ ತಡೆಗೋಡೆ ಕುಸಿತಗೊಂಡಿರುವುದು ಪರಿಸರಾಸಕ್ತರಿಗೆ ಆತಂಕವನ್ನುಂಟು ಮಾಡಿದೆ. ಕೆಳದಿ ಶಿವಪ್ಪ ನಾಯಕ ತನ್ನ ರಾಣಿಯರಿಗಾಗಿ ಈ ಕೊಳವನ್ನು ನಿರ್ಮಿಸಿದ್ದು, ಸುಮಾರು 500 ವರ್ಷಗಳ ಇತಿಹಾಸ ಹೊಂದಿದೆ. ದೇವಗಂಗೆಯಲ್ಲಿ 10 ಅಡಿ ಅಗಲ ಹಾಗೂ 20 ಅಡಿ ಉದ್ದದ ಈ ಮೂರು ಕೆರೆಗಳು ಇತಿಹಾಸವನ್ನು ಸಾರುತ್ತಿದ್ದು, ಪುರಾತತ್ವ ಇಲಾಖೆ ಈ ಸ್ಥಳದ ರಕ್ಷಣೆಯಲ್ಲಿ ಪ್ರವೃತ್ತವಾಗಿದೆ. ಆದರೆ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ತಡೆಗೋಡೆ ಕುಸಿತಗೊಂಡಿದ್ದು, ಅತ್ಯಂತ‌ ಸುಂದರ ಕೆತ್ತನೆ ಹಾಗೂ ಕಮಲಕಾರವಾಗಿ‌ ಇರುವ ಅಪರೂಪದ ದೇವಗಂಗೆ ಕೊಳವನ್ನು ಉಳಿಸಬೇಕು ಎಂಬುದು ಪರಿಸರವಾದಿಗಳ ಹಾಗೂ ಸ್ಥಳೀಯರ ಆಶಯವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.