ಹುಬ್ಬಳ್ಳಿ: ಬೇಕಾಬಿಟ್ಟಿ ತಿರುಗಾಡುತಿದ್ದ ತಂದೆ, ಮಗನಿಗೆ ಕೊರೊನಾ ಪಾಠ ಹೇಳಿದ ಡಿಸಿಪಿ
ದೇಶಾದ್ಯಂತ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡಿ ಸಾಕಷ್ಟು ಜನರನ್ನು ಬಲಿಪಡೆದಿರುವುದರಿಂದ ಸರ್ಕಾರ ಇದೀಗ ವೈರಸ್ ನಿಯಂತ್ರಣಕ್ಕೆ ಲಾಕ್ಡೌನ್ ಮೊರೆ ಹೋಗಿದೆ. ಹೀಗಿದ್ದರೂ ನಗರದಲ್ಲಿ ಸೈಕಲ್ ಮೇಲೆ ಅನಗತ್ಯವಾಗಿ ತಿರುಗಾಡುತ್ತಿದ್ದ ಬಾಲಕನಿಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ಸಂಚಾರ ವಿಭಾಗದ ಡಿಸಿಪಿ ಆರ್.ಬಿ ಬಸರಗಿ ಶಿಸ್ತಿನ ಪಾಠ ಹೇಳಿ ಕಳುಹಿಸಿದ್ದಾರೆ.