‘ಜಿಲ್ಲೆ ಕಡೆ ಯಾಕೆ ಬಂದಿಲ್ಲ,ಸಾರ್?’: ಮಾಧ್ಯಮದವರ ಮೇಲೆ ಕಾರಜೋಳ ಗರಂ - ಕಲಬುರಗಿ ಸುದ್ದಿ
🎬 Watch Now: Feature Video

ನಾಲ್ಕು ತಿಂಗಳಿಂದ ಕಲಬುರಗಿ ಕಡೆ ಯಾಕೆ ಬಂದಿಲ್ಲ ಸಾರ್, ಅಂತ ಕೇಳಿದ ಪತ್ರಕರ್ತರ ಮೇಲೆ ಉಸ್ತುವಾರಿ ಸಚಿವ ಗೋವಿಂದ ಕಾರಾಜೋಳ ಸಿಡಿಮಿಡಿಗೊಂಡಿರುವ ಘಟನೆ ನಡೆದಿದೆ. ಏ ತಮ್ಮ ನಿಮಗೆ ಎಲ್ಲಾ ಗೊತ್ತಿದೆ, ಮತ್ತೆ ಯಾಕೆ ಕೇಳ್ತಿದ್ದಿರಿ, ಹಾಗೆಲ್ಲ ಕೇಳಬಾರದು ಎಂದು ಸಿಡಿಮಿಡಿಗೊಂಡರು. ನನ್ನ ಅನುಪಸ್ಥಿತಿ ಇದ್ದರೂ ಸಿಎಂ, ಕಂದಾಯ ಸಚಿವರು, ಕೃಷಿ ಸಚಿವರು ಇಡೀ ಕ್ಯಾಬಿನೆಟ್ ಜಿಲ್ಲೆಗೆ ಆಗಮಿಸಿ ಇಲ್ಲಿನ ಸಮಸ್ಯೆಗೆ ಸ್ಪಂದಿಸಿದ್ದಾರೆ ಎಂದರು.