thumbnail

ಅಪಾಯ ಲೆಕ್ಕಿಸದೇ ತೆಪ್ಪ ಬಳಸುತ್ತಿರುವ ಡಿ.ರಾಂಪೂರು ಗ್ರಾಮಸ್ಥರು!

By

Published : Aug 11, 2019, 9:33 PM IST

ರಾಯಚೂರು: ಕೃಷ್ಣಾ ನದಿ ತೀರದ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ನದಿ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ಸಾರ್ವಜನಿಕರಿಗೆ ತೆಪ್ಪಗಳ ಬಳಕೆ ನಿಷೇಧ ಮತ್ತು ಎನ್​ಡಿಆರ್​​ಎಫ್​​ ತಂಡದ ಸಹಾಯವಿಲ್ಲದೇ ಅಪಾಯವನ್ನು ಮೈಮೇಲೆ ಹಾಕಿಕೊಳ್ಳಬೇಡಿ ಎಂದು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಡಂಗುರ ಸಾರಿದರೂ ಕೂಡ ಇದನ್ನು ಲೆಕ್ಕಿಸದೆ ತಾಲೂಕಿನ ಡಿ.ರಾಂಪೂರು ಗ್ರಾಮದಲ್ಲಿ ತೆಪ್ಪ ಬಳಕೆ ಮಾಡಿದ್ದಾರೆ. ನೀರು ಹೊಲ-ಗದ್ದೆಗಳಿಗೆ ನುಗ್ಗಿದ ಪರಿಣಾಮ ಮೋಟರ್, ಪಂಪ್​ಸೆಟ್​​ ಹಾಗೂ ಇತರೆ ಕೃಷಿ ವಸ್ತುಗಳನ್ನು ತರುವ ಸಲುವಾಗಿ ರೈತರು ತೆಪ್ಪದ ಮೊರೆ ಹೋದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.