ಗಾಳಿ ಮಳೆಗೆ ಸೌತೆಕಾಯಿ ಬೆಳೆ ನಾಶ: ತುಮಕೂರಲ್ಲಿ ರೈತ ಕಂಗಾಲು - ಕುಣಿಗಲ್
🎬 Watch Now: Feature Video

ತುಮಕೂರು: ಕಳೆದ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಅಪಾರ ಪ್ರಮಾಣದ ಸೌತೆಕಾಯಿ ಬೆಳೆ ನಾಶವಾಗಿದೆ. ಕುಣಿಗಲ್ ತಾಲೂಕಿನ ಶೆಟ್ಟಿಗೆರೆಯ ರೈತ ಅಶೋಕ್ ಎಂಬುವರು 1 ಎಕರೆ ಪ್ರದೇಶದಲ್ಲಿ ನೆಟ್ ಹೌಸ್ ಹಾಕಿ ಸೌತೆಕಾಯಿ ಬೆಳೆ ಬೆಳೆದಿದ್ದರು. ಆದರೆ ಮಳೆ ಹಾಗೂ ಗಾಳಿಯ ರಭಸಕ್ಕೆ ವಿದ್ಯುತ್ ಟ್ರಾನ್ಸ್ಫಾರ್ಮರ್ ಬೆಳೆಗಳ ಮೇಲೆ ಬಿದ್ದಿದ್ದು ನಷ್ಟ ಸಂಭವಿಸಿದೆ.