ಮೈಸೂರಿನಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾಗಿವೆ: ಡಿಸಿಪಿ ಡಾ.ಪ್ರಕಾಶ್ ಗೌಡ - DCP Dr Prakash Gowda
🎬 Watch Now: Feature Video

ಮೈಸೂರು: ಲಾಕ್ಡೌನ್ ನಂತರದ ಅನ್ಲಾಕ್ ಆರಂಭದಲ್ಲಿ ಉದ್ಯೋಗ ಸಮಸ್ಯೆಯಿಂದಾಗಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿದ್ದವು. ಅದರಲ್ಲೂ ನಿರುದ್ಯೋಗಿ ಯುವಕರು ಸರಗಳ್ಳತನಕ್ಕೆ ಕೈ ಹಾಕಿದ್ದರು. ಪೊಲೀಸ್ ಇಲಾಖೆ ಇಂತಹವರನ್ನ ಪತ್ತೆ ಮಾಡಿದ್ದು, ಆನಂತರ ಸರಗಳ್ಳತನ ಹಾಗೂ ಅಪರಾಧ ಚಟುವಟಿಕೆಗಳು ತುಂಬಾ ಕಡಿಮೆಯಾಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಡಾ.ಪ್ರಕಾಶ್ ಗೌಡ, ಲಾಕ್ಡೌನ್ ತೆರವುಗೊಳಿಸಿದ ಸ್ವಲ್ಪ ದಿನಗಳಲ್ಲಿ ಕೆಲವು ಅಪರಾಧ ಚಟುವಟಿಕೆಗಳು ಹೆಚ್ಚಾಗಿ ಕಂಡು ಬಂದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಪರಾಧ ಪ್ರಕರಣಗಳು ಕಡಿಮೆ ವರದಿಯಾಗುತ್ತಿವೆ ಎಂದರು.