ಬೆಂಗಳೂರಿನಲ್ಲಿ ಸಿಎಂ ಸಿಟಿ ರೌಂಡ್ಸ್: ಬಿಸಿಲಲ್ಲಿ ಟ್ರಾಫಿಕ್ ಜಾಮ್​ಗೆ ಬೇಸತ್ತ ಸಾರ್ವಜನಿಕರ ಆಕ್ರೋಶ - Traffic jam in Bangalore

🎬 Watch Now: Feature Video

thumbnail

By

Published : Jan 30, 2021, 3:26 PM IST

ಬೆಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಸಿಎಂ ತಪಾಸಣೆ ನಡೆಸುವ ವೇಳೆ ಝೀರೋ ಟ್ರಾಫಿಕ್ ಮಾಡಿದ್ದರಿಂದ ನಗರದ ಹಲವೆಡೆ ಸಾರ್ವಜನಿಕರಿಗೆ ಟ್ರಾಫಿಕ್ ಜಾಮ್​​ ಬಿಸಿ ತಟ್ಟಿತು. ಸಿಟಿ ರೌಂಡ್ಸ್ ಮಧ್ಯೆ ಸಿಎಂ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಕೋಶಿಶ್ ರೆಸ್ಟೋರೆಂಟ್​ಗೆ ಸಚಿವರ ಜೊತೆ ಕಾಫಿಗೆ ತೆರಳಿದರು. ಈ ವೇಳೆ ಇಡೀ ಸೇಂಟ್​ಮಾರ್ಕ್ಸ್ ರಸ್ತೆಗೆ ವಾಹನಗಳು ಬರದಂತೆ ತಡೆಹಿಡಿಯಲಾಗಿತ್ತು. 15 ನಿಮಿಷಗಳ ಬಳಿಕ ಒಂದು ಮಾರ್ಗದಲ್ಲಿ ಸಂಚಾರಕ್ಕೆ ಪೋಲಿಸರು ಅನುವು ಮಾಡಿಕೊಟ್ಟರು. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಹಿಡಿಶಾಪ ಹಾಕಿದರು. ದ್ವಿಚಕ್ರ ವಾಹನ ಸವಾರರೊಬ್ಬರು ಆಕ್ರೋಶಗೊಂಡು ಜನರಿಗೆ ಎಷ್ಟು ತೊಂದರೆ ಆಗಿದೆ. 11-45ರಿಂದ 12-45ರವರೆಗೆ ರಸ್ತೆಯಲ್ಲಿ ಬಿಸಿಲಲ್ಲೇ ಕಾದಿದ್ದೇವೆ. ರಾಜಕಾರಣಿಗಳು ಪ್ರೋಗ್ರಾಮ್​ ಮಾಡುತ್ತಾ ಕೂತಿದ್ದಾರೆ. ಪಬ್ಲಿಕ್​ಗೆ ಆಗಿರುವ ಸಮಸ್ಯೆಗೆ ಯಾರು ಹೊಣೆ ಎಂದು ಅಸಮಾಧಾನ ಹೊರಹಾಕಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.