ವಾಹನ ಡಿಕ್ಕಿ ಪರಿಣಾಮ ಸ್ಥಳದಲ್ಲೆ ಪ್ರಾಣ ಬಿಟ್ಟ ಗಂಡು ಚಿರತೆ - ರಸ್ತೆ ಅಪಘಾತದಲ್ಲಿ ಚಿರತೆ ಸಾವು

🎬 Watch Now: Feature Video

thumbnail

By

Published : Jan 21, 2020, 3:44 PM IST

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೆಕಂದವಾಡಿ ಅರಣ್ಯ ವ್ಯಾಪ್ತಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಡು ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಚಿಕ್ಕಜಾಜೂರು ಸಮೀಪದ ಹಿರೆಕಂದವಾಡಿ ಗ್ರಾಮದ ಸಮೀಪ ರಸ್ತೆ ದಾಟುವ ವೇಳೆ ಚಿರತೆಗೆ ಅಪಘಾತಕ್ಕೆ ಸಿಲುಕಿದೆ ಎನ್ನಲಾಗಿದೆ. ಸ್ಥಳೀಯರು ನೀರುಣಿಸಲು ಮುಂದಾಗಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿ ರಕ್ತಶ್ರಾವವಾಗಿತ್ತು. ಈ ಘಟನೆ ಬೆಳಗಿನ ಜಾವ 3 ಗಂಟೆಗೆ ಸಂಭವಿಸಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಿಕ್ಕಜಾಜೂರು ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.