ಸಾರ್ವಜನಿಕರು ಯಾವುದೇ ಭಯವಿಲ್ಲದೆ ಬಸ್​ಗಳಲ್ಲಿ ಓಡಾಡಬಹುದು: ಕೃಷ್ಣ ಭಾಜಪೇಯಿ

By

Published : Dec 14, 2020, 12:20 PM IST

thumbnail
ಹುಬ್ಬಳ್ಳಿ: ಸಾರಿಗೆ ನೌಕರರಲ್ಲಿ ಕೆಲವು ಗೊಂದಲಗಳಿವೆ. ಹೀಗಾಗಿ ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಶೀಘ್ರದಲ್ಲೇ ವಾಯವ್ಯ ಕರ್ನಾಟಕ ವಿಭಾಗದ ಎಲ್ಲಾ ಬಸ್ ಸಂಚಾರ ಆರಂಭಿಸಲಾಗುವುದು ಎಂದು ವಾಯವ್ಯ ‌ಕರ್ನಾಟಕ ಸಂಸ್ಥೆ ಎಂಡಿ ಕೃಷ್ಣ ಭಾಜಪೇಯಿ ಹೇಳಿದರು. ನಗರದ ಬಸ್ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೆಲವು ಗೊಂದಲಗಳಿಂದ ಬಸ್ ಸಂಚಾರ ವಿಳಂಬವಾಗಿದೆ. ಸಿಬ್ಬಂದಿ ಕೆಲಸಕ್ಕೆ ಮರಳಲು ಮನವೊಲಿಕೆ ಮಾಡಲಾಗುತ್ತಿದೆ. ಸರ್ಕಾರದ ಜೊತೆಗೆ ನೌಕರರ ಮಾತುಕತೆ ನಡೆದಿದೆ. ಆದ್ರೆ ಸಾರ್ವಜನಿಕರ ದೃಷ್ಟಿಯಿಂದ ಎಲ್ಲರೂ ಕೆಲಸಕ್ಕೆ ಹಾಜರಾಗಬೇಕು. ಸಾರ್ವಜನಿಕರು ಕೂಡ ಯಾವುದೇ ಭಯ, ಆತಂಕ ಇಲ್ಲದೆ ಬಸ್​ಗಳಲ್ಲಿ ಪ್ರಯಾಣ ಬೆಳೆಸುವಂತೆ ಅವರು ಮನವಿ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.