ಕೇಂದ್ರ ಬಜೆಟ್ ವಾಣಿಜ್ಯೋದ್ಯಮಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. : ಜಿ.ಜಿ.ಹೊಟ್ಟಿಗೌಡ್ರ
ದೇಶದ ಆರ್ಥಿಕತೆಯ ಮೇಲೆ ಗಮನ ಇರಿಸಿಕೊಂಡು ಈ ಬಾರಿ ಕೇಂದ್ರ ಸರ್ಕಾರ ಸಾರ್ವತ್ರಿಕ ಹಾಗೂ ಉತ್ತಮ ಬಜೆಟ್ ಮಂಡಿಸಿದೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಉದ್ಯೋಗ ಸೃಷ್ಟಿಯಾಗಲು ಸಹಕಾರಿಯಾಗಿದೆ. ಸಣ್ಣ ಕೈಗಾರಿಕೆಗಳನ್ನು ನಿರ್ಮಾಣ ಮಾಡಲು ವಿಶೇಷ ಸಾಲ ಯೋಜನೆ ಮಾಡಿದ್ದು, ವರ್ತಕರಿಗೆ ಕೈಗಾರಿಕೆಗಳನ್ನು ಮಾಡಲು ಅನುವು ಮಾಡಿ ಕೊಟ್ಟಿದೆ ಎಂದು ರಾಣೆಬೆನ್ನೂರಿನಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಉಪಾಧ್ಯಕ್ಷರಾದ ಜಿ.ಜಿ.ಹೊಟ್ಟಿಗೌಡ್ರ ಈಟಿವಿ ಭಾರತದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.