ಬುದ್ಧಿ ಕಲಿಯೋದ್ಯಾವಾಗ ಇವರೆಲ್ಲ.. ಅಂತರವಿಲ್ಲದೆ ಕುರಿ ಖರೀದಿಗೆ ಮುಗಿ ಬಿದ್ದ ಜನ
ಚಿಕ್ಕಬಳ್ಳಾಪುರ : ಕೊರೊನಾ ಭೀತಿಯಿಂದಾಗಿ ಸಾರ್ವಜನಿಕರಿಗೆ ಕಡ್ಡಾಯ ಮಾಸ್ಕ್ ಹಾಗೂ ಅಂತರ ಕಾಯ್ದುಕೊಳ್ಳಲು ಸರ್ಕಾರ ಆದೇಶಿಸಿದೆ. ಆದರೆ, ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರಿನಲ್ಲಿ ಮಾತ್ರ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನಷ್ಟು ಕಿಮ್ಮತ್ತು ಇಲ್ಲ. ಇಲ್ಲಿನ ಕುರಿ ಸಂತೆಯಲ್ಲಿ ಅಂತರ ಕಾಯ್ದುಕೊಳ್ಳದೇ ಕುರಿ, ಕೋಳಿ ಖರೀದಿಗೆ ಜನರು ಮುಗಿ ಬಿದ್ದಿದಾರೆ.