ಕ್ರೈಸ್ತ ಸಮುದಾಯದಿಂದ ಆಯುಧ ಪೂಜೆ-ಸಂತ ಕ್ರಿಸ್ಟೋಫರ್ಗೆ ಪ್ರಾರ್ಥನೆ - ಆಯುಧ ಪೂಜೆ ಆಚರಣೆ
🎬 Watch Now: Feature Video
ಹಿಂದೂಗಳ ಪವಿತ್ರ ಹಬ್ಬವಾದ ಆಯುಧ ಪೂಜೆಯನ್ನು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಕ್ರೈಸ್ಥ ಸಮುದಾಯದವರು ಸಂತ ಲೂರ್ದುಮಾತೆ ಚರ್ಚ್ನಲ್ಲಿ ಆಚರಿಸಿದರು. ಪಾದ್ರಿ ಕ್ರಿಸ್ಟೋಫರ್ ಸಗಾಯರಾಜ್ ಪ್ರಾರ್ಥನೆ ಮಾಡಿ ಪವಿತ್ರ ಜಲವನ್ನು ವಾಹನಗಳಿಗೆ ಪ್ರೋಕ್ಷಿಸಿ ಶುಭ ಹಾರೈಸಿದರು. ಈ ವೇಳೆ, ಅಪಘಾತಗಳಿಂದ ಪಾರು ಮಾಡುವ ರಕ್ಷಕ ಎಂದೇ ಕರೆಯುವ ಸಂತ ಕ್ರಿಸ್ಟೋಫರ್ಗೆ ವಾಹನಗಳ ಮಾಲೀಕರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಸಮುದಾಯದ ಕೆಲವರು ಇದರಲ್ಲಿ ಭಾಗಿಯಾಗಿದ್ದು ವಿಶೇಷ.