ETV Bharat / sports

ವಿರಾಟ್​ ಕೊಹ್ಲಿ ಔಟ್​ ಮಾಡುವುದರ ಹಿಂದೆ ಬಸ್​ ಚಾಲಕನ ಮಾಸ್ಟರ್​ ಪ್ಲಾನ್; ಸತ್ಯ ಬಿಚ್ಚಿಟ್ಟ ಸಾಂಗ್ವಾನ್​​! - VIRAT KOHLI RANJI TROPHY

ಇತ್ತೀಚೆಗೆ ರಣಜಿ ಟ್ರೋಫಿಯಲ್ಲಿ ವಿರಾಟ್​ ಕೊಹ್ಲಿ ಅವರನ್ನು ಕ್ಲೀನ್​ ಬೋಲ್ಡ್​ ಮಾಡಿ ಭಾರೀ ಸದ್ದು ಮಾಡಿದ್ದ ಹಿಮಾಂಶು ಸಾಂಗ್ವಾನ್ ಕೊಹ್ಲಿ ವಿಕೆಟ್​ ಪಡೆದಿದ್ದರ ಹಿಂದಿನ ಪ್ಲಾನ್​ ಬಗ್ಗೆ ತಿಳಿಸಿದ್ದಾರೆ.

VIRAT KOHLI RANJI MATCH  HIMANSHU SANGWAN KOHLI WICKET  RANJI TROPHY  ವಿರಾಟ್​ ಕೊಹ್ಲಿ ರಣಜಿ ಟ್ರೋಫಿ
Virat Kohli Ranji Match (PTI Photo)
author img

By ETV Bharat Sports Team

Published : Feb 4, 2025, 1:30 PM IST

ನವದೆಹಲಿ: ಇತ್ತೀಚೆಗೆ 12 ವರ್ಷಗಳ ನಂತರ ರಣಜಿ ಪಂದ್ಯವನ್ನು ಆಡಿದ್ದ ವಿರಾಟ್​ ಕೊಹ್ಲಿಗೆ ಕಹಿ ಅನುಭವವಾಗಿತ್ತು. ರೈಲ್ವೇಸ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದ ಕೊಹ್ಲಿ, ಹಿಮಾಂಶು ಸಾಂಗ್ವಾನ್​ ಎಸೆದ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್​ ಆಗಿದ್ದರು. ಇದರೊಂದಿಗೆ ಕೇವಲ 6 ರನ್​ಗಳಿಗೆ ಪೆವಿಲಿಯನ್​ ಸೇರಿಕೊಂಡಿದ್ದರು. ಕೊಹ್ಲಿ ವಿಕೆಟ್​ ಪಡೆಯುತ್ತಿದ್ದಂತೆ ಹಿಮಾಂಶು ಸಾಂಗ್ವಾನ್​ ಕುರಿತು ಭಾರೀ ಚರ್ಚೆಯಾಗಿದ್ದವು. ವಿಶ್ವದ ಶ್ರೇಷ್ಠ ಬ್ಯಾಟರ್​ನನ್ನೇ ಔಟ್​ ಮಾಡಿದ ಹಿಮಾಂಶು ಸಾಂಗ್ವಾನ್​ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು.

ಇದೀಗ ಸ್ವತಃ ಸಾಂಗ್ವಾನ್​, ವಿರಾಟ್​ ಕೊಹ್ಲಿ ವಿಕೆಟ್​ ಕುರಿತು ಕೆಲ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ರಣಜಿ ಪಂದ್ಯ ಆರಂಭಕ್ಕೂ ಮುನ್ನವೇ ದೆಹಲಿ ಪರ ವಿರಾಟ್​ ಕೊಹ್ಲಿ ಮತ್ತು ರಿಷಭ್​ ಪಂತ್​ ಆಡುತ್ತಿದ್ದಾರೆ ಎಂದು ನಮ್ಮ ತಂಡಕ್ಕೆ ತಿಳಿಸಲಾಗಿತ್ತು. ಆದರೆ ಈ ಪಂದ್ಯವನ್ನು ನೇರ ಪ್ರಸಾರ ಮಾಡಲಾಗುತ್ತಿದೆ ಎಂಬುದು ಮೊದಲಿಗೆ ನಮಗ್ಯಾರಿಗೂ ಗೊತ್ತಿರಲಿಲ್ಲ. ಬಳಿಕ ಈ ಬಗ್ಗೆಯೂ ನಮಗೆ ತಿಳಿಸಲಾಯಿತು.

ಈ ವೇಳೆ ನನ್ನ ಸಹ ಆಟಗಾರರು ಕೊಹ್ಲಿ ಅವರ ವಿಕೆಟ್​ ಪಡೆಯುವ ಜವಾಬ್ದಾರಿ ನಿನ್ನ ಮೇಲಿದೆ. ಹೇಗಾದರೂ ಮಾಡಿ ಅವರನ್ನು ಔಟ್​ ಮಾಡಬೇಕು ಎಂದು ಹೇಳಿದರು. ಅಲ್ಲದೆ ಅವರ ವಿಕೆಟ್​ ಪಡೆಯುವುದು ಹೇಗೆ ಎಂದು ತಂಡದ ಸದಸ್ಯರೆಲ್ಲ ಚರ್ಚಿಸಿದೆವು.

ಬಸ್​ ಚಾಲಕನ ಸಲಹೆ : ನನಗೆ ನಮ್ಮ ಸಹ ಆಟಗಾರರು ಮಾತ್ರವಲ್ಲದೆ ಬಸ್​ ಚಾಲಕ ಕೂಡ ಸಲಹೆ ನೀಡಿದ್ದರು. ನಾವು ಬಸ್ಸಿನಲ್ಲಿ ಮೈದಾನಕ್ಕೆ ಪ್ರಯಾಣಿಸುತ್ತಿದ್ದಾಗ, ಬಸ್​ ಚಾಲಕ ನನ್ನೊಂದಿಗೆ ಮಾತನಾಡುತ್ತ, ನೀವು ವಿರಾಟ್​ ಕೊಹ್ಲಿಯನ್ನು ಔಟ್​ ಮಾಡಬೇಕಾದರೆ ನಾಲ್ಕನೇ ಅಥವಾ ಐದನೇ ಸ್ಟಂಪ್​ ಲೈನ್​ನಲ್ಲಿ ಬೌಲಿಂಗ್​ ಮಾಡಿ. ಆಗ ಅವರ ವಿಕೆಟ್​ ಪಡೆಯಬಹುದು ಎಂದಿದ್ದರು.

ಕೊನೆಯಲ್ಲಿ ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್​​ ಮಾಡಿ ವಿರಾಟ್​ ಕೊಹ್ಲಿ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದೆ ಎಂದು ಹಿಮಾಂಶು ಸಾಂಗ್ವಾನ್​ ತಿಳಿಸಿದರು. ವಿಕೆಟ್​ ಬಳಿಕ ಕೊಹ್ಲಿ ಪ್ರತಿಕ್ರಿಯೆ ಕುರಿತು ಮಾತನಾಡಿದ ಅವರು, ನಮ್ಮ ಇನ್ನಿಂಗ್ಸ್ ಮುಗಿದ ಬಳಿಕ ನಾನು ಡ್ರೆಸ್ಸಿಂಗ್ ರೂಂನತ್ತ ಹೋಗುತ್ತಿದ್ದೆ. ಈ ವೇಳೆ ಆಯುಷ್​ ಬಡೋನಿ ಮತ್ತು ವಿರಾಟ್​ ಜೊತೆಯಾಗಿ ಮೈದಾನಕ್ಕೆ ಬರುತ್ತಿದ್ದರು.

ನಂತರ ಕೊಹ್ಲಿ ಅವರೇ ಸ್ವತಃ ನನ್ನನ್ನು ತಡೆದು ಕೈಕುಲುಕಿ, ನೀವು ತುಂಬಾ ಅದ್ಭುತವಾಗಿ ಬೌಲಿಂಗ್ ಮಾಡಿದ್ದೀರಿ. ನಿಮ್ಮ ಬೌಲಿಂಗ್​ ಶೈಲಿಯೂ ಉತ್ತಮವಾಗಿದೆ ಎಂದು ಹುರಿದುಂಬಿಸಿದರು. ನಂತರ ಊಟದ ವಿರಾಮದ ವೇಳೆ ನಿಮ್ಮೊಂದಿಗೆ ಒಂದು ಫೋಟೋ ಬೇಕು ಎಂದು ಕೊಹ್ಲಿಗೆ ಕೇಳಿದೆ. ಅದಕ್ಕೆ ಅವರು ಅವಕಾಶ ಮಾಡಿಕೊಟ್ಟರು ಎಂದು ಹಿಮಾಂಶು ಸಾಂಗ್ವಾನ್​ ತಿಳಿಸಿದರು.

ಇದನ್ನೂ ಓದಿ: ಭಾರತ-ಇಂಗ್ಲೆಂಡ್​ ಏಕದಿನ ಸರಣಿ: 15 ತಿಂಗಳ ಬಳಿಕ ತಂಡ ಸೇರಿದ ಸ್ಪೋಟಕ ಬ್ಯಾಟರ್!

ನವದೆಹಲಿ: ಇತ್ತೀಚೆಗೆ 12 ವರ್ಷಗಳ ನಂತರ ರಣಜಿ ಪಂದ್ಯವನ್ನು ಆಡಿದ್ದ ವಿರಾಟ್​ ಕೊಹ್ಲಿಗೆ ಕಹಿ ಅನುಭವವಾಗಿತ್ತು. ರೈಲ್ವೇಸ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದ ಕೊಹ್ಲಿ, ಹಿಮಾಂಶು ಸಾಂಗ್ವಾನ್​ ಎಸೆದ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್​ ಆಗಿದ್ದರು. ಇದರೊಂದಿಗೆ ಕೇವಲ 6 ರನ್​ಗಳಿಗೆ ಪೆವಿಲಿಯನ್​ ಸೇರಿಕೊಂಡಿದ್ದರು. ಕೊಹ್ಲಿ ವಿಕೆಟ್​ ಪಡೆಯುತ್ತಿದ್ದಂತೆ ಹಿಮಾಂಶು ಸಾಂಗ್ವಾನ್​ ಕುರಿತು ಭಾರೀ ಚರ್ಚೆಯಾಗಿದ್ದವು. ವಿಶ್ವದ ಶ್ರೇಷ್ಠ ಬ್ಯಾಟರ್​ನನ್ನೇ ಔಟ್​ ಮಾಡಿದ ಹಿಮಾಂಶು ಸಾಂಗ್ವಾನ್​ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು.

ಇದೀಗ ಸ್ವತಃ ಸಾಂಗ್ವಾನ್​, ವಿರಾಟ್​ ಕೊಹ್ಲಿ ವಿಕೆಟ್​ ಕುರಿತು ಕೆಲ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ರಣಜಿ ಪಂದ್ಯ ಆರಂಭಕ್ಕೂ ಮುನ್ನವೇ ದೆಹಲಿ ಪರ ವಿರಾಟ್​ ಕೊಹ್ಲಿ ಮತ್ತು ರಿಷಭ್​ ಪಂತ್​ ಆಡುತ್ತಿದ್ದಾರೆ ಎಂದು ನಮ್ಮ ತಂಡಕ್ಕೆ ತಿಳಿಸಲಾಗಿತ್ತು. ಆದರೆ ಈ ಪಂದ್ಯವನ್ನು ನೇರ ಪ್ರಸಾರ ಮಾಡಲಾಗುತ್ತಿದೆ ಎಂಬುದು ಮೊದಲಿಗೆ ನಮಗ್ಯಾರಿಗೂ ಗೊತ್ತಿರಲಿಲ್ಲ. ಬಳಿಕ ಈ ಬಗ್ಗೆಯೂ ನಮಗೆ ತಿಳಿಸಲಾಯಿತು.

ಈ ವೇಳೆ ನನ್ನ ಸಹ ಆಟಗಾರರು ಕೊಹ್ಲಿ ಅವರ ವಿಕೆಟ್​ ಪಡೆಯುವ ಜವಾಬ್ದಾರಿ ನಿನ್ನ ಮೇಲಿದೆ. ಹೇಗಾದರೂ ಮಾಡಿ ಅವರನ್ನು ಔಟ್​ ಮಾಡಬೇಕು ಎಂದು ಹೇಳಿದರು. ಅಲ್ಲದೆ ಅವರ ವಿಕೆಟ್​ ಪಡೆಯುವುದು ಹೇಗೆ ಎಂದು ತಂಡದ ಸದಸ್ಯರೆಲ್ಲ ಚರ್ಚಿಸಿದೆವು.

ಬಸ್​ ಚಾಲಕನ ಸಲಹೆ : ನನಗೆ ನಮ್ಮ ಸಹ ಆಟಗಾರರು ಮಾತ್ರವಲ್ಲದೆ ಬಸ್​ ಚಾಲಕ ಕೂಡ ಸಲಹೆ ನೀಡಿದ್ದರು. ನಾವು ಬಸ್ಸಿನಲ್ಲಿ ಮೈದಾನಕ್ಕೆ ಪ್ರಯಾಣಿಸುತ್ತಿದ್ದಾಗ, ಬಸ್​ ಚಾಲಕ ನನ್ನೊಂದಿಗೆ ಮಾತನಾಡುತ್ತ, ನೀವು ವಿರಾಟ್​ ಕೊಹ್ಲಿಯನ್ನು ಔಟ್​ ಮಾಡಬೇಕಾದರೆ ನಾಲ್ಕನೇ ಅಥವಾ ಐದನೇ ಸ್ಟಂಪ್​ ಲೈನ್​ನಲ್ಲಿ ಬೌಲಿಂಗ್​ ಮಾಡಿ. ಆಗ ಅವರ ವಿಕೆಟ್​ ಪಡೆಯಬಹುದು ಎಂದಿದ್ದರು.

ಕೊನೆಯಲ್ಲಿ ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್​​ ಮಾಡಿ ವಿರಾಟ್​ ಕೊಹ್ಲಿ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದೆ ಎಂದು ಹಿಮಾಂಶು ಸಾಂಗ್ವಾನ್​ ತಿಳಿಸಿದರು. ವಿಕೆಟ್​ ಬಳಿಕ ಕೊಹ್ಲಿ ಪ್ರತಿಕ್ರಿಯೆ ಕುರಿತು ಮಾತನಾಡಿದ ಅವರು, ನಮ್ಮ ಇನ್ನಿಂಗ್ಸ್ ಮುಗಿದ ಬಳಿಕ ನಾನು ಡ್ರೆಸ್ಸಿಂಗ್ ರೂಂನತ್ತ ಹೋಗುತ್ತಿದ್ದೆ. ಈ ವೇಳೆ ಆಯುಷ್​ ಬಡೋನಿ ಮತ್ತು ವಿರಾಟ್​ ಜೊತೆಯಾಗಿ ಮೈದಾನಕ್ಕೆ ಬರುತ್ತಿದ್ದರು.

ನಂತರ ಕೊಹ್ಲಿ ಅವರೇ ಸ್ವತಃ ನನ್ನನ್ನು ತಡೆದು ಕೈಕುಲುಕಿ, ನೀವು ತುಂಬಾ ಅದ್ಭುತವಾಗಿ ಬೌಲಿಂಗ್ ಮಾಡಿದ್ದೀರಿ. ನಿಮ್ಮ ಬೌಲಿಂಗ್​ ಶೈಲಿಯೂ ಉತ್ತಮವಾಗಿದೆ ಎಂದು ಹುರಿದುಂಬಿಸಿದರು. ನಂತರ ಊಟದ ವಿರಾಮದ ವೇಳೆ ನಿಮ್ಮೊಂದಿಗೆ ಒಂದು ಫೋಟೋ ಬೇಕು ಎಂದು ಕೊಹ್ಲಿಗೆ ಕೇಳಿದೆ. ಅದಕ್ಕೆ ಅವರು ಅವಕಾಶ ಮಾಡಿಕೊಟ್ಟರು ಎಂದು ಹಿಮಾಂಶು ಸಾಂಗ್ವಾನ್​ ತಿಳಿಸಿದರು.

ಇದನ್ನೂ ಓದಿ: ಭಾರತ-ಇಂಗ್ಲೆಂಡ್​ ಏಕದಿನ ಸರಣಿ: 15 ತಿಂಗಳ ಬಳಿಕ ತಂಡ ಸೇರಿದ ಸ್ಪೋಟಕ ಬ್ಯಾಟರ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.