ಸರಳವಾಗಿ ನೆರವೇರಿದ ಅರಸೀಕೆರೆ ಪ್ರಸನ್ನ ಗಣಪತಿ ನಿಮಜ್ಜನ

By

Published : Aug 30, 2020, 5:02 AM IST

thumbnail
ಹಾಸನ: (ಅರಸೀಕೆರೆ): ಅರಸೀಕೆರೆ ಶ್ರೀ ಪ್ರಸನ್ನ ಗಣಪತಿ ಸ್ವಾಮಿಯ 79ನೇ ವರ್ಷದ ಮಹೋತ್ಸವವು ಶನಿವಾರ ಸರಳವಾಗಿ ಮುಕ್ತಾಯವಾಯಿತು. ನಗರದ ಗಣಪತಿ ಪೆಂಡಲ್​ನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ಸರಳ ಅಲಂಕಾರ ಹಾಗೂ ಮಂಗಳ ವಾದ್ಯದೊಡನೆ ಟ್ರ್ಯಾಕ್ಟರ್​​ನಲ್ಲಿ ಕಂತೇನಹಳ್ಳಿ ದೊಡ್ಡಕೆರೆಗೆ ತಂದು ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಕೊರೊನಾ ಹಿನ್ನೆಲೆ ಹೆಚ್ಚು ದಿನಗಳ ಕಾಲ ಪ್ರತಿಷ್ಠಾಪನೆಗೆ ಅವಕಾಶವಿಲ್ಲದ್ದರಿಂದ ಏಳು ದಿನಗಳ ಬಳಿಕವೇ ನಿಮಜ್ಜನ ಕಾರ್ಯ ನಡೆಯಿತು. ಕೊರೊನಾ ಪಾಸಿಟಿವ್​ ಹಿನ್ನೆಲೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೊದಲ ಬಾರಿಗೆ ಗಣಪತಿ ನಿಮಜ್ಜನದಲ್ಲಿ ಪಾಲ್ಗೊಂಡಿರಲಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.