ಕೀನ್ಯಾ ತಲುಪಿದ ಐಎನ್‌ಎಸ್ ಐರಾವತ್: ದಕ್ಷಿಣ ಸುಡಾನ್ ಜನರಿಗೆ ಆಹಾರ ಸಾಮಗ್ರಿ ವಿತರಣೆ

By

Published : Nov 21, 2020, 10:59 AM IST

thumbnail
ನವೆಂಬರ್ 20 ರಂದು ಮಾನವೀಯ ಮಿಷನ್ ‘ಸಾಗರ್- II’ ನ ಭಾರತೀಯ ನೌಕಾ ಹಡಗು ಐರಾವತ್​​ ಕೀನ್ಯಾದ ಪೋರ್ಟ್ ಆಫ್ ಮೊಂಬಾಸಾ ತಲುಪಿದೆ. ನೈಸರ್ಗಿಕ ವಿಪತ್ತುಗಳು ಮತ್ತು ಕೋವಿಡ್​​-19 ಸಾಂಕ್ರಾಮಿಕ ರೋಗದ ಬಿಕ್ಕಟ್ಟು ನಿವಾರಣೆಗೆ ಭಾರತ ಸರ್ಕಾರವು ತನ್ನ ಸ್ನೇಹಯುತ ವಿದೇಶಗಳಿಗೆ ನೆರವು ನೀಡುತ್ತಿದೆ ಮತ್ತು ಅದೇ ಉದ್ದೇಶಕ್ಕೆ ಐಎನ್‌ಎಸ್ ಐರಾವತ್ ಮೂಲಕ ದಕ್ಷಿಣ ಸುಡಾನ್ ಜನರಿಗೆ ಆಹಾರ ಸಾಮಗ್ರಿ ಸಾಗಿಸಲಾಗ್ತಿದೆ. ಈ ಸಾಗರ್- II ಮಿಷನ್​ ದಕ್ಷಿಣ ಸುಡಾನ್‌ನೊಂದಿಗಿನ ಭಾರತದ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಿದೆ. ಭಾರತೀಯ ನೌಕಾಪಡೆ ರಕ್ಷಣಾ ಇಲಾಖೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಇತರ ಏಜೆನ್ಸಿಗಳೊಂದಿಗೆ ಸಮನ್ವಯದಿಂದ ಈ ಕಾರ್ಯಾಚರಣೆ ಮುಂದುವರಿಸುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.