ತಂದೆ ಆಸ್ಪತ್ರೆಯಲ್ಲಿದ್ದರೂ ಕೋವಿಡ್ ರೋಗಿಗಳ ಆರೈಕೆಗೆ ಧಾವಿಸಿದ ವೈದ್ಯ - ವೈದ್ಯನಿಂದ ಕರ್ತವ್ಯ ನಿಷ್ಠೆ
🎬 Watch Now: Feature Video

ಕಾರವಾರ: ತಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಲ್ಲಿದ್ದರೂ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರೊಬ್ಬರು ಶ್ಲಾಘನೆಗೆ ಪಾತ್ರರಾಗಿದ್ದಾರೆ. ಕೆಎಂಐಎಸ್ನ ಶ್ವಾಶಕೋಶ ತಜ್ಞ ಡಾ. ಶ್ರೀನಿವಾಸ್ ಕರ್ತವ್ಯ ನಿಷ್ಠೆ ಮೆರೆದ ವೈದ್ಯ. ಮೂಲತಃ ಶಿವಮೊಗ್ಗದವರಾದ ಇವರ ತಂದೆಗೆ ಇತ್ತೀಚೆಗೆ ಹೃದಯಾಘಾತವಾಗಿತ್ತು. ಈ ವೇಳೆ ಊರಿಗೆ ತೆರಳಿದ್ದ ಡಾ.ಶ್ರೀನಿವಾಸ್, ತಂದೆಗೆ ಚಿಕಿತ್ಸೆ ಕೊಡಿಸಿ 24 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗಿದ್ದಾರೆ. ವೈದ್ಯರ ಕೊರತೆಯಿರುವುದರಿಂದ ಕೋವಿಡ್ ರೋಗಿಗಳಿಗೆ ಸಮಸ್ಯೆಯಾಗಬಾರದೆಂದು ಈ ರೀತಿ ಮಾಡಿದ್ದಾರೆ.
Last Updated : Apr 28, 2021, 2:25 PM IST