ಮೈಸೂರಿನಲ್ಲಿ ವಿಷ್ಣು ಸ್ಮಾರಕ ಲೋಕಾರ್ಪಣೆ.. ಮಂಡ್ಯದಲ್ಲಿ ದಾದಾ ಅಭಿಮಾನಿಗಳ ಸಂಭ್ರಮ - ವಿಷ್ಣುವರ್ಧನ್ ಅಭಿಮಾನಿಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17610704-thumbnail-3x2-am.jpg)
ಮಂಡ್ಯ: ಇಂದು ಮೈಸೂರಿನಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಕ್ಕರೆ ನಾಡು ಮಂಡ್ಯದಲ್ಲಿ ವಿಷ್ಣು ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಮಂಡ್ಯ ವಿಷ್ಣು ಸೇನಾ ಸಮಿತಿಯಿಂದ ಮಂಡ್ಯ ನಗರದ ಸಂಜಯ್ ವೃತ್ತದಲ್ಲಿ ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯಕ್ಷ ವಿಷ್ಣುವಿಠಲ್ ಹಾಗೂ ಸತೀಶ್ ನೇತೃತ್ವದಲ್ಲಿ ಬೆಳ್ಳಿ ರಥಕ್ಕೆ ಚಾಲನೆ ನೀಡಲಾಯಿತು. ಪಟಾಕಿ ಸಿಡಿಸಿ ವಿಷ್ಣುವರ್ಧನ್ ಅಭಿಮಾನಿಗಳು ಸಂಭ್ರಮ ಆಚರಿಸಿದರು. ಮೈಸೂರಿನಲ್ಲಿ ವಿಷ್ಣು ಸ್ಮಾರಕ ಲೋಕಾರ್ಪಣೆಯಾಗುತ್ತಿರುವುದರಿಂದ ಮಂಡ್ಯದಿಂದ-ಮೈಸೂರಿಗೆ ನೂರಾರು ಅಭಿಮಾನಿಗಳು ತೆರಳಿದರು.
Last Updated : Feb 3, 2023, 8:39 PM IST