thumbnail

By

Published : Nov 5, 2022, 9:00 PM IST

Updated : Feb 3, 2023, 8:31 PM IST

ETV Bharat / Videos

ಅಮೇಥಿ ಆಸ್ಪತ್ರೆಯಲ್ಲಿ ಸಿಗದ ಸ್ಟ್ರೆಚರ್: ಬ್ಯಾಂಡೇಜ್ ಕಟ್ಟಿಕೊಂಡ ರೋಗಿ ಪಾಡು ನೋಡಿ

ಅಮೇಥಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮತ್ತೊಂದು ಆಸ್ಪತ್ರೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಪ್ರಕರಣ ಬೆಳಕಿಗೆ ಬಂದಿದೆ. ಅಮೇಥಿಯ ಜಗದೀಶ್‌ಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಟ್ರೆಚರ್ ನೀಡದ ಕಾರಣ ಕಾಲಿಗೆ ಪೆಟ್ಟಾಗಿರುವ ರೋಗಿಯೊಬ್ಬರು ತನ್ನ ಕಾಲನ್ನು ಎಳೆದುಕೊಂಡು ಹೋಗುವ ವಿಡಿಯೋ ವೈರಲ್​ ಆಗಿದೆ. ಕಾಲಿಗೆ ಬ್ಯಾಂಡೆಜ್ ಕಟ್ಟಿಕೊಂಡು ಒಪಿಡಿಯಿಂದ ಕಾಲನ್ನು ಎಳೆದುಕೊಂಡು ಬಂದಿದ್ದು, ನಂತರ ಆತನನ್ನು ಕುಟುಂಬಸ್ಥರು ಎತ್ತಿಕೊಂಡು ಕರೆದೊಯ್ದಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಚ್‌ಸಿ ಅಧೀಕ್ಷಕ ಡಾ.ಪ್ರದೀಪ್ ತಿವಾರಿ, ಆಸ್ಪತ್ರೆಯಲ್ಲಿ ಸ್ಟ್ರೆಚರ್‌ಗಳ ಕೊರತೆ ಇಲ್ಲ. ಸ್ಟ್ರೆಚರ್ ಕೇಳದಿದ್ದರೆ ನಾವು ಏನು ಮಾಡಬೇಕೆಂದು ಉಡಾಫೆ ಉತ್ತರ ಕೊಟ್ಟಿದ್ದಾರೆ.
Last Updated : Feb 3, 2023, 8:31 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.