ರೇವಂತ್​ ರೆಡ್ಡಿ ಅಭಿನಂದಿಸಿದ ಪೊಲೀಸ್​ ಅಧಿಕಾರಿಗಳು - ವಿಡಿಯೋ

By ETV Bharat Karnataka Team

Published : Dec 3, 2023, 1:04 PM IST

Updated : Dec 3, 2023, 1:19 PM IST

thumbnail

ಹೈದರಾಬಾದ್​: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಎಲ್ಲ ಲಕ್ಷಣಗಳಿವೆ. ಇನ್ನೂ ಫಲಿತಾಂಶ ಪೂರ್ಣವಾಗಿ ಪ್ರಕಟವಾಗುವ ಮೊದಲೇ ಪಕ್ಷದ ರಾಜ್ಯ ಅಧ್ಯಕ್ಷ, ಸಿಎಂ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರುವ ರೇವಂತ್​ ರೆಡ್ಡಿ ಅವರನ್ನು ಪೊಲೀಸ್​ ಅಧಿಕಾರಿಗಳು ಭೇಟಿಯಾಗಿ ಶುಭಾಶಯ ಕೋರಿದ್ದಾರೆ. ಹೈದರಾಬಾದ್​ನಲ್ಲಿ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿರುವ ಡಿಜಿಪಿ ಅಂಜನಿ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ರೇವಂತ್ ರೆಡ್ಡಿ ಅವರನ್ನು ಹೂಗುಚ್ಛ ನೀಡಿ ಅಭಿನಂದಿಸಿದರು.

ಇತ್ತ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಸದ್ಯ ಕಾಂಗ್ರೆಸ್​ 64 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಬಿಆರ್​ಎಸ್​ 39, ಬಿಜೆಪಿ 10, ಎಂಐಎಂ 5, ಇತರ 1 ಸ್ಥಾನದಲ್ಲಿ ಮುಂದಿದ್ದಾರೆ. ಇದಲ್ಲದೇ, ರೇವಂತ್​ ಸ್ಪರ್ಧಿಸುತ್ತಿರುವ ಕಾಮರೆಡ್ಡಿ ಮತ್ತು ಕೊಡಂಗಲ್ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಎಂಟನೇ ಸುತ್ತಿನಲ್ಲಿ ಸತತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಮರೆಡ್ಡಿ ಕ್ಷೇತ್ರದಲ್ಲಿ ಸಿಎಂ ಕೆಸಿಆರ್​ ವಿರುದ್ಧ ಸೆಣಸುತ್ತಿರುವ ರೇವಂತ್​ ಸದ್ಯ 2,346 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಕೊಡಂಗಲ್​ನಲ್ಲಿ 13ನೇ ಸುತ್ತಿನ ಅಂತ್ಯಕ್ಕೆ ರೆಡ್ಡಿ 20,923 ಮತಗಳಿಂದ ಮುನ್ನಡೆ ಹೊಂದಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಚುನಾವಣೆ: ಕಾಂಗ್ರೆಸ್​ನ ಮೊದಲ ಅಭ್ಯರ್ಥಿ ಗೆಲುವು, ಅಶ್ವರೋಪೇಟದಲ್ಲಿ ಆದಿನಾರಾಯಣ ರಾವ್​ಗೆ ಜಯ

Last Updated : Dec 3, 2023, 1:19 PM IST

TAGGED:

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.