ಮೈಸೂರು: ಅಗ್ನಿ ಆಕಸ್ಮಿಕ.. ಬೆಂಕಿ ತಾಗಿ ಮೂರು ಎಕರೆ ಕಬ್ಬಿನ ಗದ್ದೆ ನಾಶ
ಮೈಸೂರು: ಆಕಸ್ಮಿಕ ಬೆಂಕಿ ತಾಗಿ ಮೂರು ಎಕರೆ ಕಬ್ಬಿನ ಗದ್ದೆ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ತಿ.ನರಸೀಪುರ ತಾಲೂಕಿನ ಹ್ಯಾಕನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುಂದರಮ್ಮ ಎಂಬುವವರಿಗೆ ಸೇರಿದ ಮೂರು ಎಕರೆ ಕಬ್ಬಿನ ಗದ್ದೆ ಹೊತ್ತಿ ಉರಿದಿದೆ. ಬೆಂಕಿ ನಂದಿಸುವ ಕಾರ್ಯ ತಡವಾಗಿದ್ದರಿಂದ ಕಬ್ಬು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಕಬ್ಬಿನ ಗದ್ದೆ ನಾಶದಿಂದ ರೈತ ಮಹಿಳೆ ಸುಂದರಮ್ಮರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಇದನ್ನೂ ಓದಿ:ಬೆಂಗಳೂರಿನ ಎರಡು ಕಡೆ ಬೆಂಕಿ ಅವಘಡ: ಮೂರು ಕಾರು ಅಗ್ನಿಗಾಹುತಿ
Last Updated : Feb 14, 2023, 11:34 AM IST