thumbnail

ಸರಿಯಾಗಿ ಮಾಹಿತಿ ನೀಡದ ಡಿಎಚ್‌ಒ; ಅಗತ್ಯ ಅಂಕಿ-ಅಂಶಗಳೊಂದಿಗೆ ಸಭೆಗೆ ಬರುವಂತೆ ಸಚಿವ ಸಂತೋಷ್​ ಲಾಡ್ ಸೂಚನೆ

By

Published : Jun 11, 2023, 8:54 PM IST

ಧಾರವಾಡ : ಜಿಲ್ಲಾ ಆರೋಗ್ಯಾಧಿಕಾರಿ(ಡಿಎಚ್‌ಒ‌) ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​ ಲಾಡ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಧಾರವಾಡ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜನರ ಆರೋಗ್ಯ ತಪಾಸಣೆ ಬಗ್ಗೆ ಸರಿಯಾಗಿ ಮಾಹಿತಿ ನೀಡದ ಡಿಎಚ್‌ಒ ಡಾ‌. ಶಶಿ ಪಾಟೀಲ್​ ಅವರನ್ನು ಲಾಡ್ ತರಾಟೆ ತೆಗೆದುಕೊಂಡಿದ್ದಾರೆ. ತಾಲೂಕು ಆಸ್ಪತ್ರೆಗಳಿಗೆ ನಿಯಮಿತ ಭೇಟಿ ನೀಡದ್ದಕ್ಕೆ ಕೋಪಗೊಂಡು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ.  

ಬಳಿಕ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ್​ ಅವರ ವಿರುದ್ಧವೂ ಸಹ ಸಂತೋಷ್​ ಲಾಡ್ ಹರಿಹಾಯ್ದರು. ಆರ್‌ಎಸ್‌ಕೆಗಳಲ್ಲಿ ಸಿಬ್ಬಂದಿ ಇಲ್ಲ ಎಂದು ಶಿವನಗೌಡ ಹೇಳಿದರು. ಇರೋ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರ? ಎಂದು ಲಾಡ್ ಕೇಳಿದರು. ಈ ವೇಳೆ ಶಿವನಗೌಡ ಕೆಲಸ ಮಾಡಿದ್ದಾರೆ ಎಂದು ಸಮಜಾಯಿಷಿ ನೀಡಿದರು. 

ನೀವು ಎಷ್ಟು ಹಳ್ಳಿಗೆ ಹೋಗಿದ್ದೀರಾ ಹೇಳಿ? ಏನು ಕೆಲಸ ಮಾಡ್ತಾರೆ ಹೇಳಿ? ಸುಮ್ಮನೆ ಕೆಲಸ ಮಾಡ್ತಾರೆ ಅಂತಾ ಹೇಳುತ್ತಿರಾ? ಕೇಳಿದರೆ ಸಿಬ್ಬಂದಿ ಕೊರತೆ ಅಂತಿರಾ? ಇರೋ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆಯಾ ಅನ್ನೋದನ್ನು ನೋಡೋದಿಲ್ಲ. ನೀವು ಎಷ್ಟು ರೈತರ ಬಳಿ ಹೋಗಿದ್ದೀರಿ ಹೇಳಿ ನೋಡೊಣ. ಸುಮ್ಮನೆ ಇಲ್ಲಿ ಬಂದು ಏನೇನೋ ಹೇಳಬೇಡಿ ಎಂದು ಅಧಿಕಾರಿಗಳಿಗೆ ಸಚಿವ ಸಂತೋಷ್​ ಲಾಡ್ ಚಳಿ ಬಿಡಿಸಿದರು.     

ಇದನ್ನೂ ಓದಿ : ಧಾರವಾಡದಲ್ಲಿ 'ಶಕ್ತಿ ಯೋಜನೆ'ಗೆ ಚಾಲನೆ ನೀಡಲಿದ್ದಾರೆ ಸಚಿವ ಸಂತೋಷ‌ ಲಾಡ್

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.