thumbnail

ಗುರುನಾನಕ್ ಜಯಂತಿ: ಸ್ವರ್ಣ ಮಂದಿರಕ್ಕೆ ಹರಿದು ಬಂದ ಭಕ್ತ ಸಾಗರ - ವಿಡಿಯೋ

By ETV Bharat Karnataka Team

Published : Nov 27, 2023, 5:14 PM IST

ಅಮೃತಸರ(ಪಂಜಾಬ್​): ಸಿಖ್ ಧರ್ಮದ ಸಂಸ್ಥಾಪಕ ಮತ್ತು ಅವರ ಮೊದಲ ಧರ್ಮಗುರು ಗುರುನಾನಕ್ ಅವರ ಜಯಂತಿಯನ್ನು ವಿಶ್ವದಾದ್ಯಂತ ಅತ್ಯಂತ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ಆಚರಿಸಲಾಗುತ್ತಿದೆ. ಇಂದು ಬೆಳಗ್ಗೆಯಿಂದಲೇ ಸಚ್‌ಖಂಡ್ ಶ್ರೀ ಹರ್​ಮಂದಿರ್​ ಸಾಹೇಬ್​ ಗುರುದ್ವಾರ (ಗೋಲ್ಡನ್​ ಟೆಂಪಲ್)ಗೆ​ ಲಕ್ಷಾಂತರ ಭಕ್ತರು ಆಮಿಸಿ, ಸಚ್​ಖಂಡ್​ ಶ್ರೀ ಹರ್​ಮಂದಿರ್​ ಸಾಹೇಬರ ದರ್ಶನ ಪಡೆದು, ಸರೋವರದಲ್ಲಿ ಸ್ನಾನ ಮಾಡಿದರು. ನಂತರ ಪ್ರಕಾಶ್ ಪುರಬ್ ಆಚರಿಸಿದರು. ಈ ವೇಳೆ ಶ್ರೀ ಗುರುನಾನಕ್ ದೇವ್ ಜಿಯವರ ಪ್ರಕಾಶ ಪುರಬ್‌ನಲ್ಲಿ ಸಿಖ್ ಸಂಗತ್‌ಗೆ ಶುಭಾಶಯ ಕೋರಲಾಯಿತು.

ಈ ಸಂದರ್ಭದಲ್ಲಿ ಅಕಲ್ ತಖ್ತ್ ಸಾಹೇಬ್​​​ನ ಜತೇದಾರ್ ಗಿಯಾನಿ ರಘ್ಬೀರ್ ಸಿಂಗ್ ಅವರು, ದೇಶ - ವಿದೇಶಗಳಲ್ಲಿ ನೆಲೆಸಿರುವ ಗುರುನಾನಕ್ ಅವರ ಅನುಯಾಯಿಗಳಿಗೆ ಶುಭಾಶಯ ತಿಳಿಸಿ, ನಾವು ಗುರುನಾನಕ್​ರ ಸಂದೇಶಗಳನ್ನು ಅನುಸರಿಸಬೇಕು ಎಂದು ಸಿಖ್ ಸಮುದಾಯಕ್ಕೆ ಕರೆ ನೀಡಿದರು.

ದೆಹಲಿಯಿಂದ ಬಂದಿದ್ದ ಭಕ್ತೆ ಮಾತನಾಡಿ, ಎಂಟು ವರ್ಷಗಳ ನಂತರ ಇಂದು ಗೋಲ್ಡನ್​ ಟೆಂಪಲ್​ಗೆ ಬಂದಿದ್ದೇನೆ. ಇಲ್ಲಿಗೆ ಬಂದಿದ್ದರಿಂದ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ ಎಂದರು. ಸ್ವರ್ಣ ಮಂದಿರಕ್ಕೆ ಆಗಮಿಸಿದ್ದ ಬಾಲಕನೊಬ್ಬ ಮಾತನಾಡಿ, ಗುರುದ್ವಾರಕ್ಕೆ ಬಂದು ಗುರುನಾನಕ್ ದೇವ್ ಜಿ ತೋರಿಸಿದ ಮಾರ್ಗವನ್ನು ಅನುಸರಿಸಬೇಕು ಮತ್ತು ಯುವ ಜನರು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಹೇಳಿದರು.

ಇದನ್ನೂ ಓದಿ: ಮೈಸೂರು: ಗೊಮ್ಮಟಗಿರಿಯ ಬಾಹುಬಲಿಗೆ ಮಹಾಮಸ್ತಕಾಭಿಷೇಕ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.