thumbnail

By

Published : Nov 21, 2022, 7:00 AM IST

Updated : Feb 3, 2023, 8:33 PM IST

ETV Bharat / Videos

ಚಿಕ್ಕಮಗಳೂರು: 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ; ಗ್ರಾಮಸ್ಥರ ನಿಟ್ಟುಸಿರು

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಸಕೆರೆ ಸಮೀಪದ ಹೇರಿಕೆ ಗ್ರಾಮದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ. ಗ್ರಾಮದ ರವಿ ರೆಡ್ಡಿ ಎಂಬುವವರ ಮನೆಯ ಸಮೀಪ ಸರ್ಪವನ್ನು ಕಂಡು ಮನೆಯವರು ಹಾಗೂ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು. ಕೂಡಲೇ ಉರಗ ತಜ್ಞ ಆರಿಫ್ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅವರು, 30 ನಿಮಿಷಕ್ಕೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಅಂದಾಜು 14 ಅಡಿ ಉದ್ದದ ಕಾಳಿಂಗನನ್ನು ಸೆರೆ ಹಿಡಿದರು. ಹಾವು ಆಹಾರವಿಲ್ಲದೆ ನಿತ್ರಾಣಗೊಂಡಿತ್ತು. ನೀರು ಕುಡಿಸಿ ಕೆಲ ಕ್ಷಣ ಆರೈಕೆ ಮಾಡಲಾಯಿತು. ನಂತರ ಅರಣ್ಯ ಇಲಾಖೆ ಸಿಬ್ಬಂದಿಯ ಸಮ್ಮುಖದಲ್ಲಿ ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
Last Updated : Feb 3, 2023, 8:33 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.