ತೆನೆ ಇಳಿಸಿ ಕಾಂಗ್ರೆಸ್​ ಸೇರ್ಪಡೆಯಾಗುವ ಒಲವು ತೋರಿದ ಜೆಡಿಎಸ್​ ಮುಖಂಡ

By

Published : Feb 4, 2023, 3:20 PM IST

Updated : Feb 6, 2023, 4:07 PM IST

thumbnail

ಮಂಡ್ಯ: ಜಿಲ್ಲೆಯ ಜೆಡಿಎಸ್​ ಮುಖಂಡ ಹಾಗೂ ನಾಗಮಂಗಲ ತಾಲೂಕಿನ ಜೆಡಿಎಸ್ ಮಾಜಿ ಅಧ್ಯಕ್ಷ ಜವರೇಗೌಡ ಅವರು ತೆನೆ ಇಳಿಸಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗುವ ಒಲವು ತೋರಿದ್ದಾರೆ. ಈ ಬಗ್ಗೆ ನಗರದಲ್ಲಿ ಇಂದು (ಶನಿವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ತಾವು ಕುಟುಂಬ ರಾಜಕಾರಣ ವಿರೋಧಿಸಿ ಕಾಂಗ್ರೆಸ್​ಗೆ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ. ನಾವು ಈ ಹಿಂದೆ ವಂಶ ರಾಜಕಾರಣ ಅಂತ ಕಾಂಗ್ರೆಸ್ ಪಕ್ಷವನ್ನು ಅನ್ನು ವಿರೋಧಿಸುತ್ತಿದ್ದೆವು. ಆದರೆ, ಇದೀಗ ವಿಪರೀತ ಕುಟುಂಬ ರಾಜಕಾರಣ ಇರುವುದು ಜೆಡಿಎಸ್ ಪಕ್ಷದಲ್ಲಿದೆ ಅಂತ ಗೊತ್ತಾಗಿದೆ. ಜಾತಿ ಎತ್ತುಕಟ್ಟುವ ಸಂಘರ್ಷ ಕಾಂಗ್ರೆಸ್​ ಪಕ್ಷದಲ್ಲಿಲ್ಲ. ಹಾಗಾಗಿ ನಾವು ಮಾಜಿ ಸಚಿವ ಚಲುವರಾಯಸ್ವಾಮಿಗೆ ಬೆಂಬಲ ನೀಡುವುದಾಗಿ ಹೇಳಿದರು. ಇದೇ ವೇಳೆ ಜೆಡಿಎಸ್​ ವಿರುದ್ಧ ಕಟು ಹೇಳಿಕೆಗಳ ಮೂಲಕ ವಾಗ್ದಾಳಿ ನಡೆಸಿದ ಜವರೇಗೌಡ, ಈ ಪಕ್ಷದ ಬಗ್ಗೆ ಮಾತನಾಡುವುದಾದರೆ ಕೊನೆಯ ಮಾತು ಇರುವುದಿಲ್ಲ. ಹಾಗಾಗಿ ನಾನು ಸೇರಿದಂತೆ ಮುಂದಿನ ದಿನಗಳಲ್ಲಿ ಕೆಲವರು ಕೈ ಬಲಪಡಿಸುವ ನಿರ್ಧಾರ ಮಾಡಿರುವುದಾಗಿ ತಿಳಿಸಿದರು.  

Last Updated : Feb 6, 2023, 4:07 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.