thumbnail

By

Published : Feb 18, 2023, 5:28 PM IST

ETV Bharat / Videos

ಸಚಿವ ಅಶ್ವತ್ಥನಾರಾಯಣ್ ಹೇಳಿಕೆ ಖಂಡಿಸಿ ಹೊನ್ನಾಳಿ ಬಂದ್ : ಕುರುಬ ಸಮಾಜದಿಂದ ಪ್ರತಿಭಟನೆ

ಸಚಿವ ಅಶ್ವತ್ಥನಾರಾಯಣ್ ಹೇಳಿಕೆ ಖಂಡಿಸಿ ಕುರುಬರ ಸಂಘವು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಂದ್​ಗೆ ಕರೆ ನೀಡಿ, ಬೃಹತ್ ಪ್ರತಿಭಟನೆ ನಡೆಸಿತು. 'ಟಿಪ್ಪುಗೆ ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕ್ಬೇಕೆಂಬ' ಸಚಿವ ಅಶ್ವತ್ಥನಾರಾಯಣ್ ಹೇಳಿಕೆಯನ್ನು ವಿರೋಧಿಸಿದ ಕುರುಬ ಸಂಘವು ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿತು. 

ಪಟ್ಟಣದಲ್ಲಿ ಕುರುಬ ಸಮಾಜದಿಂದ ‌ಬೃಹತ್ ಪ್ರತಿಭಟನೆ ಹಮ್ಮಿಕೊಂಡು, ಸಚಿವರ ಭಾವಚಿತ್ರಕ್ಕೆ ಬೆಂಕಿ ಹಂಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಹೊನ್ನಾಳಿ ಬಂದ್​​​ಗೆ ಉತ್ತಮ‌‌ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು. 

ಇದನ್ನೂಓದಿ:ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನನ್ನ ಅಧಿಕಾರ ವ್ಯಾಪ್ತಿ ಅಲ್ಲ: ಸುರ್ಜೆವಾಲಾ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.