ಪಾಲಕ್ಕಾಡ್ ದೇವಸ್ಥಾನದ ಮೆರವಣಿಗೆಯಲ್ಲಿ ಮದವೇರಿದ ಆನೆ ದಾಳಿ.. ಅದೃಷ್ಟವಶಾತ್ ಪಾರಾದ ಮಾವುತ
![ETV Thumbnail thumbnail](https://etvbharatimages.akamaized.net/etvbharat/prod-images/320-214-17340254-thumbnail-3x2-thadf.jpg)
ಪಾಲಕ್ಕಾಡ್(ಕೇರಳ): ಪಾಲಕ್ಕಾಡ್ ಜಿಲ್ಲೆಯ ದೇವಸ್ಥಾನದ ಉತ್ಸವವೊಂದರಲ್ಲಿ ಮದವೇರಿದ ಆನೆ ದಾಳಿ ನಡೆಸಿದೆ. ಈ ವೇಳೆ, ಮಾವುತ ಗಾಯಗೊಂಡಿದ್ದು, 6 ಬೈಕ್ಗಳು ಮತ್ತು ದೇವಸ್ಥಾನದ ಛಾವಣಿಯನ್ನು ಧ್ವಂಸ ಮಾಡಿದೆ. ಬುಧವಾರ ಬೆಳಗ್ಗೆ ಕಿಷ್ಕಂಚೇರಿ ತಿರುವಾರ ದೇವಸ್ಥಾನದಲ್ಲಿ ನಿರಾಮಲ ಮಹೋತ್ಸವದ ಅಂಗವಾಗಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ 'ಪುತೂರು ದೇವಿನಂದನ್' ಎಂಬ ಆನೆಯು ಮತ್ತೊಂದು ಆನೆಯ ಮೇಲೆ ದಾಳಿ ನಡೆಸಿದೆ. ಈ ವೇಳೆ ಮೇಲೆ ಕೂತಿದ್ದವರು ತಕ್ಷಣವೇ ಕೆಳಗೆ ಹಾರಿದ್ದಾರೆ. ಮಾವುತ ಗಿರೀಶ್(35) ಕೆಳಗೆ ಜಿಗಿದಾಗ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಆನೆಯನ್ನು ನಿಯಂತ್ರಿಸಲು ಮಾವುತರು ಹರಸಾಹಸಪಟ್ಟಿದ್ದು, ಅಂಕುಶದಿಂದ ತಿವಿದು, ಸಂಕೋಲೆ ಹಾಕಿ ಬಂಧಿಸಿದ್ದಾರೆ.
Last Updated : Feb 3, 2023, 8:37 PM IST