ಹಳೆ ದ್ವೇಷಕ್ಕೆ ಕಾರು ಹರಿಸಿ ಬಾಲಕನ ಕೊಂದ ಕೀಚಕ.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ - Murder charges against man who killed the boy

🎬 Watch Now: Feature Video

thumbnail

By ETV Bharat Karnataka Team

Published : Sep 10, 2023, 9:33 PM IST

ತಿರುವನಂತಪುರಂ (ಕೇರಳ) : ಹತ್ತನೇ ತರಗತಿ ಬಾಲಕನ ಮೇಲೆ ಕಾರು ಹರಿಸಿ ಕೊಲೆಗೈದ ಆರೋಪದ ಮೇಲೆ ಕಾರು ಚಾಲಕನ ವಿರುದ್ಧ ಕೇರಳ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮೃತ ಬಾಲಕನನ್ನು ಆದಿಶೇಖರ್​ ಎಂದು ಗುರುತಿಸಲಾಗಿದೆ. ಪ್ರಿಯರಂಜನ್​ ಕೊಲೆಗೈದ ಆರೋಪಿ ಎಂದು ತಿಳಿದುಬಂದಿದೆ.

ಕಳೆದ ಆಗಸ್ಟ್​ 30ರಂದು ಇಲ್ಲಿನ ಪೂವಾಚಲ ಎಂಬಲ್ಲಿ ಬಾಲಕ ಆದಿಶೇಖರ್​ ಮೇಲೆ ಪ್ರಿಯರಂಜನ್​ ತನ್ನ ಕಾರು ಚಲಾಯಿಸಿದ್ದು, ಬಾಲಕ ಮೃತಪಟ್ಟಿದ್ದ. ಈ ಅಪಘಾತದ ದೃಶ್ಯ ಇಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಆರೋಪಿ ಪ್ರಿಯರಂಜನ್​ ಪರಾರಿಯಾಗಿದ್ದ. ಅಲ್ಲದೆ ಆರೋಪಿಯು ಬಾಲಕನಿಗೆ ದೂರದ ಸಂಬಂಧಿ ಎಂದು ತಿಳಿದುಬಂದಿದೆ. ಕೃತ್ಯದ ಸಿಸಿಟಿವಿ ದೃಶ್ಯಗಳು ಹೊರಬರುತ್ತಿದ್ದಂತೆ ಪೊಲೀಸರು ಈ ಸಂಬಂಧ ಆರೋಪಿ ಪ್ರಿಯರಂಜನ್​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈತನ ವಿರುದ್ಧ ಸೆಕ್ಷನ್​ 302ರಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಯೊಬ್ಬರು, ಪ್ರಕರಣ ಸಂಬಂಧ ಮೊದಲು ನಾವು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದೆವು. ಬಾಲಕನ ಅಂತ್ಯಕ್ರಿಯೆ ನಂತರ ಸಂಬಂಧಿಕರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಈ ವೇಳೆ ನಾವು ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದೆವು. ಈ ಸಂಬಂಧ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಹಳೆ ದ್ವೇಷದ ಹಿನ್ನೆಲೆ ಆರೋಪಿ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು. ಕೆಲವು ತಿಂಗಳ ಹಿಂದೆ ಇಲ್ಲಿನ ದೇವಾಲಯದ ಬಳಿ ಪ್ರಿಯರಂಜನ್​ ಮೂತ್ರ ವಿಸರ್ಜನೆ ಮಾಡುವಾಗ ಬಾಲಕ ಪ್ರಶ್ನಿಸಿದ್ದ. ಈ ಸಂಬಂಧ ಬಾಲಕನ ಮೇಲೆ ಆರೋಪಿ ದ್ವೇಷ ಸಾಧಿಸಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ವಿರಾಟ್‌ ಕೊಹ್ಲಿಗೆ ಬೆಳ್ಳಿಯ ಬ್ಯಾಟ್ ಉಡುಗೊರೆ ನೀಡಿದ ಶ್ರೀಲಂಕಾ ಯುವ ಕ್ರಿಕೆಟಿಗ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.