thumbnail

By ETV Bharat Karnataka Team

Published : Oct 2, 2023, 8:31 PM IST

ETV Bharat / Videos

ಮಂಗಳೂರಿನಲ್ಲಿ 60 ಬಸ್​ಗಳ ಒಡೆಯ ಆತ್ಮಹತ್ಯೆ.. ಸಾಲು ಸಾಲು ಬಸ್​ಗಳೊಂದಿಗೆ ಮಾಲೀಕನ ಅಂತಿಮಯಾತ್ರೆ

ಮಂಗಳೂರು : ನಗರದ ಮಹೇಶ್ ಮೋಟಾರ್ಸ್​ ಬಸ್ ಮಾಲೀಕ ಪ್ರಕಾಶ್​ ಶೇಖ ಅವರ ಸಾವಿನ ಹಿನ್ನೆಲೆಯಲ್ಲಿ ಇಂದು ಅವರ ಒಡೆತನದ ಮಹೇಶ್ ಬಸ್​ಗಳು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿರುವ ವಿಡಿಯೋ ವೈರಲ್ ಆಗಿದೆ. 

ಈ‌ ಬಸ್​ಗಳ ಮೆರವಣಿಗೆ ಇದು ಕಂಬನಿ ಮಿಡಿವ ಅಂತಿಮಯಾತ್ರೆಯಾಗಿತ್ತು. ನಗರದ ಖ್ಯಾತ ಮಹೇಶ್ ಬಸ್ ಮಾಲೀಕ ಪ್ರಕಾಶ್ ಶೇಖ ಅವರು ನಿನ್ನೆ ಕದ್ರಿ ಕಂಬಳದಲ್ಲಿರುವ ಅಪಾರ್ಟ್‌ಮೆಂಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 60 ಬಸ್​ಗಳಿರುವ ಅವರು ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದರು.

ಪ್ರಕಾಶ್ ಶೇಖ ಅವರ ಮೃತದೇಹ ಮಹಜರು ಕಾರ್ಯ ನಗರದ ಎ. ಜೆ ಆಸ್ಪತ್ರೆಯಲ್ಲಿ ನಡೆದಿತ್ತು. ಸೋಮವಾರ ಬೆಳಗ್ಗೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬಳಿಕ ಅವರದ್ದೇ ಮಹೇಶ್ ಬಸ್​ಗಳ ಮೆರವಣಿಗೆಯೊಂದಿಗೆ ಅವರ ಪಾರ್ಥಿವ ಶರೀರದ ಅಂತಿಮಯಾತ್ರೆ ನಡೆಯಿತು.

ಹೀಗೆ ಸಾಲು ಸಾಲು‌ ಬಸ್​ಗಳು ರಸ್ತೆಯಲ್ಲಿ ಸಾಗುತ್ತಿದ್ದರೆ, ಎಲ್ಲರ ಎದೆ ಭಾರವಾಗಿತ್ತು. ಇಷ್ಟು ಸಮಯ ಜೊತೆಗಿದ್ದು, ಅನ್ನ ಹಾಕಿದ ಮಾಲೀಕ ಇನ್ನಿಲ್ಲ ಎಂಬ ನೋವು ಎಲ್ಲ ಬಸ್ ಸಿಬ್ಬಂದಿಯಲ್ಲಿ ತುಂಬಿತ್ತು. ಪ್ರಕಾಶ್ ಶೇಖ ಅವರು ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಸದಸ್ಯರು, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಎಲ್ಲಾ ಬಸ್ ಮಾಲೀಕರಿಗೂ ಇವರು ಸ್ಫೂರ್ತಿಯ ಚಿಲುಮೆಯಾಗಿದ್ದರು. ಇವರ ತಂದೆಯವರಾದ ಜಯರಾಮ್ ಶೇಖ ಅವರು ಬಸ್ ಮಾಲೀಕರ ಸಂಘದ ಹಿರಿಯರು ಹಾಗೂ ಸಂಘದ ಮಾಜಿ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಬಸ್ ಉದ್ಯಮಿ ಆತ್ಮಹತ್ಯೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.