ಬೆಂಗಳೂರು: ಕ್ಷಣಾರ್ಧದಲ್ಲಿ ಮಾಯವಾದ ಆಟೋ

By

Published : Nov 22, 2022, 4:41 PM IST

Updated : Feb 3, 2023, 8:33 PM IST

thumbnail
ಪೆಟ್ರೋಲ್ ಬಂಕ್ ಮುಂದೆ‌ ನಿಲ್ಲಿಸಿದ್ದ ಆಟೋವನ್ನು ಕ್ಷಣಾರ್ಧದಲ್ಲಿ ಮಂಗಳಮುಖಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಾಯಂಡಹಳ್ಳಿ ಬಳಿಯ ಪೆಟ್ರೋಲ್​ ಬಂಕ್​ನಲ್ಲಿ ನಡೆದಿದೆ. ಈ ಸಂಬಂಧ ಬ್ಯಾಟರಾಯನಪುರ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದೇ ತಿಂಗಳು 16ರಂದು ನಾಯಂಡಹಳ್ಳಿ ಬಳಿಯ‌‌ ಪೆಟ್ರೋಲ್ ಬಂಕ್ ಮುಂದೆ ಆಟೋ ‌ನಿಲ್ಲಿಸಿದ ಚಾಲಕ ಡಿಎಲ್​ ಸಂಗ್ರಹಿಸಲು ಬಂಕ್​ಗೆ ಹೋಗಿದ್ದಾನೆ. ಇದೇ ವೇಳೆ, ಬರುತ್ತಿದ್ದ ಮಾನಸಿಕ ಅಸ್ವಸ್ಥೆ ಮೇರಿ ಎಂಬ ಮಂಗಳಮುಖಿ ಆಟೋದಲ್ಲಿ ಕೀ ಇರುವುದನ್ನು ಕಂಡು ಆಟೋವನ್ನು‌‌ ಚಲಾಯಿಸಿಕೊಂಡು ಪರಾರಿಯಾಗಿದ್ದಾಳೆ. ಬಳಿಕ ಸುಮನಹಳ್ಳಿ ಬಳಿ ಕಾರ್​ಗೆ ಗುದ್ದಿ ಪುನಃ ಪರಾರಿಯಾಗಿದ್ದಾಳೆ. ಈ ಪ್ರಕರಣವನ್ನು ಪರಿಶೀಲಿಸಿದ ಪೊಲೀಸರು ಆಟೋ ಓಡಿಸಿಕೊಂಡು ಪರಾರಿಯಾದ ಮಂಗಳಮುಖಿಯು ಮಾನಸಿಕ ಅಸ್ವಸ್ಥೆಯಾಗಿದ್ದಳು ಎಂದು ಕಂಡುಕೊಂಡಿದ್ದಾರೆ. ಹೀಗಾಗಿ ಈ ಸಂಬಂಧ ಯಾವುದೇ ದೂರನ್ನು ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
Last Updated : Feb 3, 2023, 8:33 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.