thumbnail

By ETV Bharat Karnataka Team

Published : Dec 22, 2023, 10:17 PM IST

ETV Bharat / Videos

ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಹಿರಿಯ ನಟಿ ಲೀಲಾವತಿ ಪಿಂಡ ಪ್ರದಾನ

ಮಂಡ್ಯ: ಕನ್ನಡ ಚಿತ್ರರಂಗದ ಹಿರಿಯ, ಹೆಸರಾಂತ ನಟಿ ಲೀಲಾವತಿ ನಿಧನದ ಹಿನ್ನೆಲೆಯಲ್ಲಿ ಇಂದು ಪುತ್ರ ವಿನೋದ್​ ರಾಜ್​ ಅವರು ಕಾವೇರಿ ನದಿಯಲ್ಲಿ ಪಿಂಡ ಪ್ರದಾನ ಮಾಡಿದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಪುರೋಹಿತ ಲಕ್ಷ್ಮೀಶ್ ನೇತೃತ್ವದಲ್ಲಿ ವಿಧಿ-ವಿಧಾನಗಳು ನೆರವೇರಿದವು. ಮಡಿಕೆಯಲ್ಲಿ ಸಮಾಧಿ ಮಣ್ಣು ತಂದಿದ್ದ ವಿನೋದ್ ರಾಜ್, ಕಾವೇರಿ ನದಿಗೆ ಪೂಜೆ ಮಾಡಿ ಅರ್ಪಿಸಿದರು. ಈ ಸಂದರ್ಭದಲ್ಲಿ ಲೀಲಾವತಿ ಅವರ ಕುಟುಂಬಸ್ಥರು, ಆತ್ಮೀಯರು ಉಪಸ್ಥಿತರಿದ್ದರು.

ಸುಮಾರು ನಾಲ್ಕೂವರೆ ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಕನ್ನಡದ 'ಕುಲವಧು' ಡಾ.ಲೀಲಾವತಿ ಡಿಸೆಂಬರ್​ 8ರಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಮೋಘ ಅಭಿನಯ ತೋರಿದ್ದರು. ಕನ್ನಡದಲ್ಲಿ ಮಾತ್ರವೇ 400ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಲೀಲಾವತಿ ದೊಡ್ಡ ಸ್ಟಾರ್ ನಟಿಯಾಗಿದ್ದರೂ ಕೂಡ ಸರಳ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದರು.

ಇದನ್ನೂ ಓದಿ: 2023ರಲ್ಲಿ ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಿವರು..

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.