ಮಂಡ್ಯ: ಮುತ್ತೆತ್ತರಾಯನ ದರ್ಶನ ಪಡೆದ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್​ಕುಮಾರ್

By

Published : Nov 10, 2022, 4:10 PM IST

Updated : Feb 3, 2023, 8:31 PM IST

thumbnail

ಮಂಡ್ಯ: ಗಂಧದ ಗುಡಿ ಬಿಡುಗಡೆ ನಂತರ ನಾಡಿನ ಹಲವಾರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವ ಅಶ್ವಿನಿ ಪುನೀತ್​ ರಾಜ್​ಕುಮಾರ್​​​ ಅವರು ಇಂದು ಬೆಳಗ್ಗೆ ಮುತ್ತತ್ತಿಗೆ ಆಗಮಿಸಿ ಶ್ರೀ ಮುತ್ತೆತ್ತರಾಯನ ದರ್ಶನ ಪಡೆದರು. ಮುತ್ತತ್ತಿಯ ಶ್ರೀ ಆಂಜನೇಯ ಸ್ವಾಮಿ ರಾಜ್​ಕುಮಾರ್ ಕುಟುಂಬದ ಆರಾಧ್ಯ ದೈವ. ರಾಜ್​​​ಕುಮಾರ್ ಕಾಲದಿಂದಲೂ ಈ ಕುಟುಂಬಸ್ಥರು ಆಗಾಗ ಮುತ್ತತ್ತಿಗೆ ಭೇಟಿ ನೀಡಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತ ಬಂದಿದ್ದಾರೆ. ಅದರಂತೆ ಇಂದು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಅದಕ್ಕೂ ಮೊದಲು ಹಲಗೂರಿನಲ್ಲಿ ಬಾಬು ಅವರ ಹೋಟೆಲ್​​ಗೆ ಭೇಟಿ ನೀಡಿ ಚಿಬ್ಲು ಇಡ್ಲಿ ಸವಿದರು. ಅಶ್ವಿನಿ ಅವರ ಜೊತೆ ರಾಘವೇಂದ್ರ ರಾಜ್​​ಕುಮಾರ್ ಅವರ ಪತ್ರ ಯುವರಾಜ್ ರಾಜಕುಮಾರ್​, ನಿರ್ದೇಶಕ ಸಂತೋಷ್ ಆನಂದ್ ರಾವ್ ಸೇರಿದಂತೆ ಹಲವರು ಇದ್ದರು.

Last Updated : Feb 3, 2023, 8:31 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.