ಧನಲಕ್ಷ್ಮಿ ಅವತಾರದಲ್ಲಿ ಕೋಟೆ ಮಾರಮ್ಮ: ಅಮ್ಮನ ದರ್ಶನ ಪಡೆದು ಪುನೀತರಾದ ಭಕ್ತರು

By

Published : Apr 13, 2021, 9:23 PM IST

thumbnail
ರಾಮನಗರ: ಯುಗಾದಿ ಹಬ್ಬದ ಪ್ರಯುಕ್ತ ಜಿಲ್ಲೆಯ ಚನ್ನಪಟ್ಟಣ ಟೌನ್​ನಲ್ಲಿರುವ ಕೋಟೆ ಮಾರಮ್ಮನಿಗೆ ದುಡ್ಡಿನಿಂದ ಅಲಂಕಾರ ಮಾಡಲಾಗಿತ್ತು. 1 ಲಕ್ಷ ರೂ. ಮೌಲ್ಯದ 10, 20, 50, 100, 200, ಮತ್ತು 500 ಮುಖಬೆಲೆಯ ನೋಟುಗಳನ್ನು ಅಲಂಕಾರಕ್ಕೆ ಬಳಸಲಾಗಿತ್ತು. ಎಲ್ಲರೂ ಬೇವು ಬೆಲ್ಲ ತಿಂದು ಒಳ್ಳೆಯದನ್ನ ಮಾತನಾಡಿ ಎಂಬಂತೆ ದೇವಿಗೆ ದುಡ್ಡಿನಲ್ಲಿ ಅಲಂಕಾರ ಮಾಡುವ ಮೂಲಕ‌ ಸರ್ವರಿಗೂ ಐಶ್ವರ್ಯ ಪ್ರಾಪ್ತಿಯಾಗಲೆಂದು ದುಡ್ಡಿನಿಂದ ಅಲಂಕಾರ ಮಾಡಿರುವುದಾಗಿ ದೇಗುಲದ ಅರ್ಚಕರು ತಿಳಿಸಿದರು. ಮಾರಮ್ಮನ ಧನಲಕ್ಷ್ಮಿ ಅವತಾರ ನೋಡಿ ಭಕ್ತರು ಪುಳಕಿತರಾಗಿದ್ದು, ದರ್ಶನ ಪಡೆದು ಪುನೀತರಾದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.