'ನಟಸಾರ್ವಭೌಮ'ನ ಅಗಲಿಕೆ ಅಭಿಮಾನಿ ಕಾನ್ಸ್ಟೇಬಲ್ ಗೀತ ನಮನ..
![ETV Thumbnail thumbnail](https://etvbharatimages.akamaized.net/etvbharat/prod-images/320-214-13504916-thumbnail-3x2-appu.jpg)
ಯುವರತ್ನ, ನಟ ಪುನೀತ್ ರಾಜ್ಕುಮಾರ್ ಅಗಲಿಕೆ ಲಕ್ಷಾಂತರ ಹೃದಯಕ್ಕೆ ಮಾಸಲಾಗದಷ್ಟು ಘಾಸಿ ಉಂಟು ಮಾಡಿದೆ. ಅದೆಷ್ಟೋ ಅಭಿಮಾನಿಗಳು ಅಪ್ಪುವಿನ ಅಗಲಿಕೆ ತಾಳತಾಲಾರದೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ನಗರದ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್ಸ್ಟೇಬಲ್ ಭೀಮ್ಶಿ ಅವರು ನಟ ಪುನೀತ್ ರಾಜ್ಕುಮಾರ್ ಕುರಿತು ಗೀತೆಯೊಂದನ್ನು ಬರೆದು ಹಾಡುವ ಮೂಲಕ ರಾಜರತ್ನನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.