ತರಕಾರಿ ಮಾರಾಟಕ್ಕಿಳಿದ ಚಂದನ್ ಶೆಟ್ಟಿ... ಜನರ ಮನೆ ಬಾಗಿಲಿಗೇ ಬಂದು ಹೆಲ್ಪ್!
ಬೆಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇದರಿಂದ ಸಾಮಾನ್ಯ ಜನರಿಂದ ಹಿಡಿದು ಶ್ರೀಮಂತರ ಜೀವನವೂ ಸಂಪೂರ್ಣ ಸ್ಥಗಿತವಾಗಿದೆ. ಎಲ್ಲರೂ ಮನೆಯಲ್ಲಿದ್ದು, ಹೊರಗೆ ಓಡಾಡಲು ಅವಕಾಶವಿಲ್ಲ. ಹೀಗಾಗಿ ಜನರ ಸಂಕಷ್ಟಕ್ಕೆ ನೆರವಾಗುವ ಸದುದ್ದೇಶದಿಂದ ರ್ಯಾಪ್ ಸಂಗೀತ ಸಂಯೋಜಕ ಚಂದನ್ ಶೆಟ್ಟಿ ತರಕಾರಿ ಮಾರುತ್ತಿದ್ದಾರೆ.