26 ಕ್ಕೆ ಗಡಿಗೆ ತೆರಳಲಿವೆ ಟ್ರಾಕ್ಟರ್ಗಳು: ಈ ಮೋಡಿಫೈ ಮುಂದೆ ಅಶ್ರುವಾಯು ಲೆಕ್ಕಕ್ಕಿಲ್ಲ!
ಪಂಜಾಬ್: ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಮುಕ್ತಿ ಸಿಗುವ ಲಕ್ಷಣ ಕಂಡು ಬರುತ್ತಿಲ್ಲ. ಇನ್ನು ಇದೇ ತಿಂಗಳ 26 ರಂದು ಟ್ರಾಕ್ಟರ್ ಮೆರವಣಿಗೆ ನಡೆಸಲು ರೈತರು ಸಿದ್ಧರಾಗುತ್ತಿದ್ದು, ಕೇಂದ್ರದ ವಿರುದ್ಧ ಸಿಡಿದೇಳಲು ಎಲ್ಲಾ ತಯಾರಿ ಮಾಡುಕೊಳ್ಳುತ್ತಿದ್ದಾರೆ. ಪಂಜಾಬ್ನ ವಿವಿಧ ನಗರಗಳ ಸಾವಿರಾರು ರೈತರು ತಮ್ಮ ಟ್ರಾಕ್ಟರುಗಳನ್ನು ರ್ಯಾಲಿಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಅವುಗಳ ಮಾರ್ಪಾಡಿಗೆ ಮುಂದಾಗಿದ್ದಾರೆ. ಜಲಂಧರ್ನ ಪಡಿಯಾನಾ ಗ್ರಾಮದ ರೈತ ಅಮರ್ಜಿತ್ ಸಿಂಗ್ ಎಂಬುವರು ಸಂಪೂರ್ಣವಾಗಿ ತಮ್ಮ ಟ್ರಾಕ್ಟರ್ನ್ನು ಮಾರ್ಪಡಿಸಿದ್ದಾರೆ. ಅವರು ತಮ್ಮ ಟ್ರಾಕ್ಟರ್ ಅನ್ನು ಶಸ್ತ್ರಸಜ್ಜಿತ ಟ್ರಾಕ್ಟರ್ ಆಗಿ ಪರಿವರ್ತಿಸಿದ್ದು, ಹರಿಯಾಣ ಗಡಿಗೆ ಹೋದಾಗ ಅಲ್ಲಿ ಅಶ್ರುವಾಯು ಮತ್ತು ಇತರ ಅನೇಕ ಪೊಲೀಸರ ಕ್ರಮಗಳನ್ನು ಇದು ಎದುರಿಸಲಿದೆ.