ಲಾಕ್​ಡೌನ್​ ಉಲ್ಲಂಘಿಸಿದವರಿಗೆ ಮಂಗಳಾರತಿ ಎತ್ತಿ, ಕೈಯಲ್ಲಿ ಬಾಳೆಹಣ್ಣು ಇಟ್ಟ ಪೊಲೀಸರು - Police 'aarti' of people

🎬 Watch Now: Feature Video

thumbnail

By

Published : Apr 22, 2020, 3:27 PM IST

ಕಾನ್ಪುರ್​(ಉತ್ತರ ಪ್ರದೇಶ): ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ತರುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿ ಮನೆಯಿಂದ ಯಾರೂ ಹೊರಬರದಂತೆ ಮನವಿ ಮಾಡಿದೆ. ಆದರೆ ಇದಾವುದನ್ನು ಲೆಕ್ಕಿಸದ ಜನರು ಬೇಕಾ ಬಿಟ್ಟಿಯಾಗಿ ಓಡಾಡುತ್ತಲೇ ಇದ್ದಾರೆ. ಲಾಕ್​ಡೌನ್​ ಪ್ರಾರಂಭವಾದಾಗಿನಿಂದಲೂ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಲಾಠಿ ರುಚಿಯನ್ನು ತೋರಿಸಿದ್ದಾಗಿದೆ. ಆದರೆ ಇದಾವುದಕ್ಕೂ ಜಗ್ಗದ ಜನರಿಗೆ ರಸ್ತೆ ಮಧ್ಯದಲ್ಲಿಯೇ ಮಂಗಳಾರತಿ ತೋರಿ ಪ್ರಸಾದ ರೂಪವಾಗಿ ಬಾಳೆ ಹಣ್ಣನ್ನು ನೀಡುವ ಮೂಲಕ ಲಾಕ್​ಡೌನ್​ ಉಲ್ಲಂಘಿಸಿದ ಜನರಿಗೆ ಮುಜುಗರವಾಗುವಂತೆ ಮಾಡಿದ್ದಾರೆ ಕಾನ್ಪುರ್​ ಪೊಲೀಸರು. ಆರತಿ ಎತ್ತಿ ಬಾಳೆ ಹಣ್ಣು ನೀಡಿದ ದೃಶ್ಯ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.