ಮೊಬೈಲ್​ ಕದ್ದು ಪರಾರಿಯಾಗ್ತಿದ್ದವರಿಗೆ ಸ್ಥಳೀಯರಿಂದ ಸಖತ್​ ಗೂಸಾ... ವಿಡಿಯೋ! - ಸಿಸಿಟಿವಿಯಲ್ಲಿ ವಿಡಿಯೋ

🎬 Watch Now: Feature Video

thumbnail

By

Published : Jan 28, 2021, 4:57 PM IST

ನವದೆಹಲಿ: ಸಿಲಿಂಡರ್ ಸಾಗಾಣಿಕೆ ಮಾಡ್ತಿದ್ದ ವ್ಯಕ್ತಿಯೋರ್ವನ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಪರಾರಿಯಾಗ್ತಿದ್ದ ದುಷ್ಕರ್ಮಿಗಳಿಗೆ ಸ್ಥಳೀಯರು ಸಖತ್​ ಆಗಿ ಪಾಠ ಕಲಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ಉಸ್ಮಾನ್​ಪುರದಲ್ಲಿ ಈ ಘಟನೆ ನಡೆದಿದ್ದು, ಸ್ಕೂಟರ್​ ಮೇಲೆ ಬಂದಿರುವ ಇಬ್ಬರು ರೋಡ್​ನಲ್ಲಿ ಸಿಲಿಂಡರ್ ಗಾಡಿ ತಳ್ಳಿಕೊಂಡು ಹೋಗುತ್ತಿದ್ದ ವ್ಯಕ್ತಿಯ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಪರಾರಿಯಾಗಲು ಮುಂದಾಗಿದ್ದಾರೆ. ಈ ವೇಳೆ ರೋಡ್​ನಲ್ಲಿದ್ದ ವ್ಯಕ್ತಿಯೋರ್ವ ಅವರನ್ನ ತಡೆ ಹಿಡಿದಿದ್ದು, ಧರ್ಮದೇಟು ನೀಡಿ ಪೊಲೀಸರಗೆ ಹಸ್ತಾಂತರ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.