ಜೆಎನ್ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ: ನಟ ನಾನಾ ಪಾಟೇಕರ್ ಹೇಳಿದ್ದೇನು?
ದೇಶದ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಜೆಎನ್ಯು ವಿದ್ಯಾರ್ಥಿಗಳು ಮತ್ತು ಬೋಧಕರ ಮೇಲೆ ಮುಸುಕುಧಾರಿಗಳಾಗಿ ಬಂದ ದುಷ್ಕರ್ಮಿಗಳು ನಡೆಸಿದ ದಾಳಿಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ನಾನಾ ಪಾಟೇಕರ್, ವಿದ್ಯಾರ್ಥಿಗಳು ಕಲಿಯಲು ಹೋದಾಗ ಅವರು ಆ ಸ್ಥಳದಲ್ಲಿ ಕಲಿಸಬೇಕು. ಕೆಟ್ಟದ್ದನ್ನು ಮಾಡುವ ಮೂಲಕ ನಿಮ್ಮ ಹೆತ್ತವರನ್ನು ನಿರಾಸೆ ಮಾಡಬಾರದು ಎಂದಿದ್ದಾರೆ.