ಬಂಗಾಳದಲ್ಲಿ ಲಾಠಿ ಚಾರ್ಜ್,ಅಶ್ರುವಾಯು ಪ್ರಯೋಗ: ಸಿಕ್ಕ ಸಿಕ್ಕವರ ಮೇಲೆ ಪೊಲೀಸರಿಂದ ಹಲ್ಲೆ! - ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಪ್ರೊಟೆಸ್ಟ್
🎬 Watch Now: Feature Video

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡ ಮನೀಷ್ ಶುಕ್ಲಾ ಹತ್ಯೆ ವಿಚಾರವಾಗಿ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು 'ನಬಣ್ಣ ಚಲೋ' ಪ್ರತಿಭಟನೆ ನಡೆಸುತ್ತಿದ್ದು, ಅದು ಹಿಂಸಾಚಾರ ರೂಪ ಪಡೆದುಕೊಂಡಿದೆ. ಈ ವೇಳೆ, ಪೊಲೀಸರು ಅಶ್ರುವಾಯು - ಲಾಠಿ ಪ್ರಹಾರ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಕಚೇರಿ ಬಳಿ ಬ್ಯಾರಿಕೇಡ್ ಮುರಿಯಲು ಪ್ರತಿಭಟನಾಕಾರರು ಮುಂದಾದ ವೇಳೆ ಆಕ್ರೋಶಗೊಂಡ ಪೊಲೀಸರು ಮಾನವೀಯತೆ ಮರೆತು ಸಿಕ್ಕ - ಸಿಕ್ಕವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.