ಕಿಸಾನ್ ಮಹಾ ಪಂಚಾಯತ್​ ವೇದಿಕೆಯಲ್ಲಿ ಕಾಣಿಸಿಕೊಂಡ ಕೆಂಪುಕೋಟೆ ಹಿಂಸಾಚಾರದ ಆರೋಪಿ ಲಖಾ ಸಿಧಾನ - ಪೊಲೀಸರಿಗೆ ಸವಾಲ್ ಹಾಕಿದ ಲಖಾ ಸಿಧಾನ

🎬 Watch Now: Feature Video

thumbnail

By

Published : Feb 23, 2021, 7:40 PM IST

ಬಟಿಂಡಾ ( ಪಂಜಾಬ್): ಜನವರಿ 26 ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಲಖಾ ಸಿಧಾನಾ, ಜಿಲ್ಲೆಯ ಮೆಹರಾಜ್​ನಲ್ಲಿ ನಡೆದ ಕಿಸಾನ್ ಮಹಾಪಂಚಾಯತ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ. ದೆಹಲಿ ಹಿಂಸಾಚಾರದ ಬಳಿಕ ಲಖಾ ಸಿಧಾನಾ ತಲೆ ಮರೆಸಿಕೊಂಡಿದ್ದರಿಂದ, ಆತನ ಬಗ್ಗೆ ಮಾಹಿತಿ ನೀಡಿದರೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಈ ನಡುವೆ ಇಂದು ಸಿಧಾನ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾನೆ. ಧೈರ್ಯವಿದ್ದರೆ ಸಿಧಾನನನ್ನು ಬಂಧಿಸುವಂತೆ ಕಾರ್ಯಕ್ರಮದ ವೇದಿಕೆಯಲ್ಲಿ ರೈತ ಮುಖಂಡರು ಪೊಲೀಸರಿಗೆ ಸವಾಲು ಹಾಕಿದರು. ಲಖಾ ಸಿಧಾನ ಕೆಂಪು ಕೋಟೆ ಬಳಿ ಹಿಂಸಾಚಾರದ ವೇಳೆ ಫೇಸ್​ಬುಕ್ ಲೈವ್ ಮಾಡಿ ಗಮನ ಸೆಳೆದಿದ್ದ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.