ರಕ್ಷಣೆ, ಬಾಹ್ಯಾಕಾಶದಲ್ಲಿ ಉದ್ಯಮದಲ್ಲಿ ಅಗ್ರ 5 ರಾಷ್ಟ್ರಗಳಲ್ಲಿ ಭಾರತ ಗುರುತಿಸುವಂತೆ ಮಾಡುವುದೇ ಗುರಿ: ರಾಜನಾಥ್​!

By

Published : Oct 7, 2020, 8:52 PM IST

thumbnail
ನವದೆಹಲಿ: ರಕ್ಷಣಾ ವಲಯ ಹಾಗೂ ಏರೋಸ್ಪೇಸ್​ ಉದ್ಯಮದಲ್ಲಿ ಭಾರತವನ್ನ ಅಗ್ರ 5 ರಾಷ್ಟ್ರಗಳಲ್ಲಿ ಗುರುತಿಸುವಂತೆ ಮಾಡುವುದೇ ನಮ್ಮ ಗುರಿ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದ್ದಾರೆ. ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಉತ್ಪಾದನೆವರೆಗೆ ಸ್ವಾವಲಂಬನೆ ಸಾಧಿಸುವುದು ಹಾಗೂ ಇತರ ಸ್ನೇಹಿತ ದೇಶಗಳ ಬೇಡಿಕೆ ಈಡೇರಿಸಲು ನಾವು ಮುಂದಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಏರೋ ಇಂಡಿಯಾ 2021ರ ರೌಂಡ್​ ಟೇಬಲ್​ನಲ್ಲಿ ಮಾತನಾಡಿದ ಅವರು, ಏರೋ ಇಂಡಿಯಾದಲ್ಲಿ ಭಾರತೀಯ ರಕ್ಷಣಾ ಮತ್ತು ಏರೋಸ್ಪೇಸ್​​​ ಸಾಮರ್ಥ್ಯ ಪ್ರದರ್ಶಿಸುವಲ್ಲಿ ಭಾರತ ಪ್ರಮುಖ ಸ್ಥಾನ ಪಡೆದಿದೆ ಎಂದಿ ಅವರು ತಿಳಿಸಿದ್ದಾರೆ. 13ನೇ ಆವೃತ್ತಿ ಏರೋ ಇಂಡಿಯಾ ಫೆಬ್ರವರಿ 3ರಿಂದ 7ರವರೆಗೆ ನಡೆಯಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.