thumbnail

By

Published : Nov 27, 2020, 8:16 PM IST

ETV Bharat / Videos

ಬಿಹಾರ ಅಧಿವೇಶನದಲ್ಲಿ ಮಾತಿನಯುದ್ಧ.. ತೇಜಸ್ವಿ ಮೇಲೆ ಮುಗಿಬಿದ್ದ ಸಿಎಂ ನಿತೀಶ್​!

ಪಾಟ್ನಾ: ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ಇಂದು ಸಿಎಂ ನಿತೀಶ್ ಕುಮಾರ್ ಮತ್ತು ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ನಡುವೆ ವಾಗ್ವಾದ ನಡೆಯಿತು. ಕೊಲೆ ಪ್ರಕರಣವೊಂದನ್ನು ಕೈಗೆತ್ತಿಕೊಂಡ ತೇಜಸ್ವಿ, ಸಿಎಂ ಮೇಲೆ ಆರೋಪಗಳ ಸುರಿಮಳೆಗಳನ್ನೇ ಗೈದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನಿತೀಶ್ ಕುಮಾರ್, ಆರ್​ಜೆಡಿ ಮುಖಂಡ ತೇಜಸ್ವಿಗೆ ತಮ್ಮ ಹಿರಿತನದ ಮಾತಿನಿಂದಲೇ ಟಾಂಗ್​ ನೀಡಿದರು. ಚಾರ್ಜ್‌ಶೀಟ್ ಇದ್ದರೂ ನಿಮ್ಮನ್ನು ಉಪಮುಖ್ಯಮಂತ್ರಿ ಮಾಡಿದ್ದು ಯಾರು ಎಂದು ಪ್ರಶ್ನಿಸಿದ್ದಕ್ಕೆ ಅಧಿವೇಶನದಲ್ಲಿ ಕೋಲಾಹಲ ಉಂಟಾಯಿತು. ಕೊರೊನಾ ಬಿಕ್ಕಟ್ಟು ನಲ್ ಜಲ ಯೋಜನೆ ಸೇರಿದಂತೆ ಇತರೆ ವಿಷಯಗಳು ವಿಧಾನಸಭೆ ಅಧಿವೇಶನದಲ್ಲಿ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟವು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.