thumbnail

By

Published : Sep 23, 2019, 7:49 PM IST

ETV Bharat / Videos

ಬದಕಲು ನೆರವು ನೀಡಿ, ಇಲ್ಲವೇ ಸಾಯಲು ಅನುಮತಿಸಿ!!

ಕ್ಯಾನ್ಸರ್​ ಗಡ್ಡೆ ಆತನ ಅರ್ಧ ಮುಖವನ್ನೇ ವಿಕಾರಗೊಳಿಸಿದೆ. ಮೊಗದ ಅರ್ಧದಷ್ಟು ಆವರಿಸಿರುವ ಕ್ಯಾನ್ಸರ್​ ಗಡ್ಡೆ ಆತನಿಗೆ ಬದುಕಲು ಬಿಡುತ್ತಿಲ್ಲ. ಹೀಗಾಗಿ ಆತ ಸಾಯಲು ದಯಾಮರಣ ಕೋರಿದ್ದಾನೆ. ಒಡಿಶಾದ ಬೋಲಂಗೀರ್ ಜಿಲ್ಲೆಯ ಮನಬೋಧಾನಿಗೆ 8ನೇ ತರಗತಿಯಲ್ಲೇ ಈ ಕ್ಯಾನ್ಸರ್​ ಗಡ್ಡೆ ಬೆಳೆದಿತ್ತು. 2009ರಲ್ಲಿ ಆತ ಕಟಕ್​ನಲ್ಲಿ ಆಪರೇಷನ್​ ಮಾಡಿಸಿಕೊಂಡಿದ್ರೂ ಪ್ರಯೋಜನವಾಗಲಿಲ್ಲ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಆ ಗಡ್ಡೆ ಆತನ ಆಕಾರವನ್ನೇ ವಿಕಾರಗೊಳಿಸಿದೆ. ಈ ಗಡ್ಡೆ ತೆಗೆಸಲು ನವದೆಹಲಿಯ ಏಮ್ಸ್​ನಲ್ಲಿ ಆಪರೇಷನ್​ ಮಾಡಿಸಬೇಕಾಗಿದ್ದು, ಒಡಿಶಾ ಲೋಕಸಭಾ ಭವನಕ್ಕೆ ತೆರಳಿದ್ದರೂ ಪ್ರಯೋಜನವಾಗಲಿಲ್ಲ. ಎನ್​ಜಿಒ ಮೂಲಕ ಆರೋಗ್ಯ ಸಚಿವರನ್ನು ಭೇಟಿ ಮಾಡಿದ್ರೂ ಉಪಯೋಗವಾಗಲಿಲ್ಲ. ಹೀಗಾಗಿ ಆತ  ನನಗೆ ಬದುಕಲು ನೆರವು ನೀಡಿ,  ಇಲ್ಲವೇ ಸಾಯಲು ಅನುಮತಿಸಿ ಎಂದು ದಯಾಮರಣ ಕೋರಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.