thumbnail

By

Published : Feb 11, 2023, 10:43 PM IST

Updated : Feb 14, 2023, 11:34 AM IST

ETV Bharat / Videos

20000 ಕೆಂಪು ಅಡಕೆಗಳಿಂದ ದೇವಸ್ಥಾನ ಸ್ತಂಭಗಳ ಅಲಂಕಾರ

ಕಣ್ಣೂರು (ಕೇರಳ): ಇಲ್ಲಿಯ ಮಾಟಮಂಗಲಂನಲ್ಲಿರುವ ನಿಲಾಯರ್​ ಭಗವತಿ ದೇವಸ್ಥಾದಲ್ಲಿ ಕಲಿಯಾಟಂ ಎಂಬ ಉತ್ಸವದ ಪ್ರಯುಕ್ತ ಕೆಂಪು ಅಡಕೆಯಿಂದ ದೇವಸ್ಥಾನ ಸ್ತಂಭಗಳನ್ನು ಸಿಂಗಾರಗೊಳಿಸಲಾಗಿತ್ತು. ಫೆ.4 ರಿಂದ 8 ವರೆಗೆ ನಡೆದ ಈ ಉತ್ಸವದಲ್ಲಿ ಸುಮಾರು 20,000 ಕೆಂಪು ಅಡಕೆಗಳನ್ನು ಬಳಸಿ ದೇವಸ್ಥಾನದ ಸ್ತಂಭಗಳನ್ನು ಸಿಂಗಾರಗೊಳಿಸಲಾಗಿತ್ತು. ಇನ್ನು ಪ್ರತಿವರ್ಷ ನಡೆಯುವ ಈ ಉತ್ಸವಕ್ಕೆ 20000 ಮಾಗಿದ ಅಡಕೆಗಳನ್ನು ತಂದು ಅಲಂಕಾರ ಮಾಡಲಾಗುತ್ತದೆ. 

ಅಲ್ಲದೇ ಈ ಉತ್ಸವದಂದು ಸುತ್ತ ಊರುಗಳಲ್ಲಿ ಬೆಳೆದಿರುವ ತಾಜಾ ಅಡಕೆಯನ್ನು ತರಲಾಗುತ್ತದೆ. ಬಳಿಕ ದೇವಸ್ಥಾನದ ಕಂಬಗಳನ್ನು ಶುದ್ಧಿಕರಿಸಿ ಅಡಕೆಗಳನ್ನು ದಾರದಿಂದ ಪೋಣಿಸಿ ಆ ಕಂಬಗಳಿಗೆ ಕಟ್ಟಲಾಗುತ್ತದೆ. ಈ ಉತ್ಸವ ನೋಡಲು ಕೇರಳದ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಜನರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಈ ನಾಲ್ಕುದಿನಗಳ ಕಾಲ ತೆಯ್ಯಂ (ಮೂರ್ತಿಗಳ) ಪ್ರದರ್ಶನವೂ ಇಲ್ಲಿ ನಡೆಯುತ್ತವೆ.

ಇದನ್ನೂ ಓದಿ: ಭಂಡಾರ ಒಡತಿ ಮಾಯಕ್ಕದೇವಿ ದರ್ಶನಕ್ಕೆ ಹರಿದು‌ ಬಂದ ಭಕ್ತ ಸಾಗರ

Last Updated : Feb 14, 2023, 11:34 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.