ETV Bharat / sukhibhava

ಹೃದ್ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗುವ 'ರಾಮ್​ ಕಿಟ್'​

author img

By ETV Bharat Karnataka Team

Published : Jan 11, 2024, 11:02 AM IST

ಹೃದಯಾಘಾತವಾದಾಗ ತಕ್ಷಣ ನೀಡುವ ಚಿಕಿತ್ಸೆಗಳು ವ್ಯಕ್ತಿಯ ಜೀವ ಉಳಿಸುವಲ್ಲಿ ಪ್ರಮುಖವಾಗಿವೆ. ಈ ಹಿನ್ನೆಲೆಯಲ್ಲಿ ಅಗತ್ಯ ಔಷಧ ಹೊಂದಿರುವ ಕಿಟ್​ ಅನ್ನು ಉತ್ತರ ಪ್ರದೇಶದ ಆಸ್ಪತ್ರೆಯೊಂದು ಅಭಿವೃದ್ಧಿಪಡಿಸಿದ್ದು, ರಾಮ ಕಿಟ್​ ಎಂದು ಹೆಸರಿಟ್ಟಿದೆ.

UP hospital develops  An emergency kit for heart patients
UP hospital develops An emergency kit for heart patients

ಕಾನ್ಪುರ್​: ಹೃದ್ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಔಷಧಗಳಿರುವ 'ರಾಮ್​ ಕಿಟ್'​ ಅನ್ನು ಕಾನ್ಪುರದ ಲಕ್ಷ್ಮೀಪತ್​ ಸಿಂಘಾನಿಯಾ ಇನ್ಸಿಟಿಟ್ಯೂಟ್​​ ಆಫ್​ ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್​ ಸರ್ಜರಿ ಅಭಿವೃದ್ಧಿಪಡಿಸಿದೆ. ಈ ಕಿಟ್​​ನಲ್ಲಿ ರಾಮನ ಚಿತ್ರದೊಂದಿಗೆ ಜೀವ ಉಳಿಸುವ ಪ್ರಮುಖ ಔಷಧಗಳು ಮತ್ತು ಆಸ್ಪತ್ರೆಯ ಸಹಾಯವಾಣಿಯ​ ಸಂಖ್ಯೆ​ ಇದೆ. ಈ ಕಿಟ್​ 'ನಾವು ಚಿಕಿತ್ಸೆ ನೀಡುತ್ತೇವೆ. ಅವರು (ರಾಮ) ಗುಣಪಡಿಸುತ್ತಾರೆ' ಎಂಬ ಪರಿಕಲ್ಪನೆ ಹೊಂದಿದೆ.

ರಾಮ್​ ಕಿಟ್​ ಅನ್ನು ಪ್ರಯಾಗ್​ರಾಜ್​ ಜಿಲ್ಲೆಯ ಸುಮಾರು 5 ಸಾವಿರ ಕುಟುಂಬಗಳಿಗೆ ಕಂಟೋನ್ಮೆಂಟ್​ ಆಸ್ಪತ್ರೆಯ ಅಧಿಕಾರಿ ನೀಡಲಿದ್ದಾರೆ. ಈ ರೀತಿಯ ಕಿಟ್​ ನೀಡುತ್ತಿರುವ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಕೂಡ ಈ ಆಸ್ಪತ್ರೆ ಪಾತ್ರವಾಗಿದೆ. 'ರಾಮ್​ ಕಿಟ್'​ನಲ್ಲಿ ಇಕೋಸ್ಪಿನ್​ (ರಕ್ತ ತೆಳುಗೊಳಿಸುವ), ರೋಸುವಾಸ್ಟಾಟಿನ್​ (ಕೊಲೆಸ್ಟ್ರಾಲ್​ ನಿಯಂತ್ರಣ) ಮತ್ತು ಸೋರ್ಬಿಟ್ರೇಟ್​​ (ಹೃದಯದ ಉತ್ತಮ ಕಾರ್ಯಾಚರಣೆ) ಔಷಧಗಳನ್ನು ಇದು ಹೊಂದಿದೆ. ಈ ಔಷಧಗಳು ಹೃದಯದ ಸಮಸ್ಯೆ ಹೊಂದಿರುವವರಿಗೆ ತಕ್ಷಣದ ಪರಿಹಾರ ನೀಡುತ್ತದೆ. ಚಳಿಗಾಲದಲ್ಲಿ ಹೃದ್ರೋಗ ಮತ್ತು ಮಿದುಳಿನ ಪಾರ್ಶ್ವವಾಯು ಪ್ರಕರಣ ಹೆಚ್ಚುವ ಹಿನ್ನೆಲೆಯಲ್ಲಿ ರಾಮ್​ ಕಿಟ್​ ಪ್ರತಿಯೊಬ್ಬರಿಗೂ ಉಪಯೋಗವಾಗಲಿದೆ. ರೋಗಿಯ ಗೋಲ್ಡನ್​ ಅವರ್​ನಲ್ಲಿ ಜೀವ ಉಳಿಸಲು ಸಹಾಯ ಮಾಡುತ್ತದೆ ಎಂದು ಕಂಟೋನ್ಮೆಂಟ್​ ಆಸ್ಪತ್ರೆಯ ನಿರ್ದೇಶಕ ಡಾ.ಎಸ್​.ಕೆ.ಪಾಂಡೆ ತಿಳಿಸಿದ್ದಾರೆ.

ರಾಮನ ಮೇಲೆ ನಂಬಿಕೆಯೇ ಇದಕ್ಕೆ ರಾಮ್‌ ಕಿಟ್‌ ಎಂದು ಹೆಸರಿಡಲು ಕಾರಣ ಎಂದು ಕಾನ್ಪುರದ ಲಕ್ಷ್ಮೀಪತ್​ ಸಿಂಘಾನಿಯಾ ಇನ್ಸಿಟಿಟ್ಯೂಟ್​​ ಆಫ್​ ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್​ ಸರ್ಜರಿಯ ಹಿರಿಯ ಹೃದ್ರೋಗ ತಜ್ಞ ಡಾ.ನೀರಾಜ್​ ಕುಮಾರ್​ ಹೇಳಿದ್ದಾರೆ. ಈ ಕಿಟ್​ನಲ್ಲಿ ಜೀವ ಉಳಿಸುವ ಔಷಧಗಳಿವೆ. ರಕ್ತವನ್ನು ತೆಳು ಮಾಡಲು, ಹೃದಯ ನಾಳದಲ್ಲಿರುವ ಬ್ಲಾಕೇಜ್​ ತೆರೆಯಲು ಮತ್ತು ಹೃದಯ ರೋಗಿಗಳಿಗೆ ತಕ್ಷಣ ಪರಿಹಾರ ನೀಡುತ್ತದೆ. ಜೀವ ಉಳಿಸುವ ಈ ಕಿಟ್​​ಗೆ ಇದಕ್ಕಿಂತ ಉತ್ತಮ ಹೆಸರು ಯಾವುದು? ಎಂದರು.

ಬಡವರನ್ನು ಗಮನದಲ್ಲಿರಿಸಿಕೊಂಡು ಕೇವಲ 7 ರೂ.ಗೆ ಈ ಕಿಟ್​ ಅಭಿವೃದ್ಧಿಪಡಿಸಲಾಗಿದೆ. ಈ ಕಿಟ್​ ಇದೆ ಎಂದ ಮಾತ್ರಕ್ಕೆ ಜನರು ಇದೊಂದಿದ್ದರೆ ಸಾಕು ಎಂದು ತೀವ್ರತರದ ಎದೆನೋವು ಹಾಗು ಇತರೆ ನೋವನ್ನು ನಿರ್ಲಕ್ಷಿಸದೇ ಮನೆಯಲ್ಲಿಯೇ ಇರಬಾರದು ಎಂದು ಅವರು ಸಲಹೆ ನೀಡಿದರು. (ಐಎಎನ್​ಎಸ್​)

ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅಡ್ವಾಣಿ: ವಿಹೆಚ್‌ಪಿ

ಕಾನ್ಪುರ್​: ಹೃದ್ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಔಷಧಗಳಿರುವ 'ರಾಮ್​ ಕಿಟ್'​ ಅನ್ನು ಕಾನ್ಪುರದ ಲಕ್ಷ್ಮೀಪತ್​ ಸಿಂಘಾನಿಯಾ ಇನ್ಸಿಟಿಟ್ಯೂಟ್​​ ಆಫ್​ ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್​ ಸರ್ಜರಿ ಅಭಿವೃದ್ಧಿಪಡಿಸಿದೆ. ಈ ಕಿಟ್​​ನಲ್ಲಿ ರಾಮನ ಚಿತ್ರದೊಂದಿಗೆ ಜೀವ ಉಳಿಸುವ ಪ್ರಮುಖ ಔಷಧಗಳು ಮತ್ತು ಆಸ್ಪತ್ರೆಯ ಸಹಾಯವಾಣಿಯ​ ಸಂಖ್ಯೆ​ ಇದೆ. ಈ ಕಿಟ್​ 'ನಾವು ಚಿಕಿತ್ಸೆ ನೀಡುತ್ತೇವೆ. ಅವರು (ರಾಮ) ಗುಣಪಡಿಸುತ್ತಾರೆ' ಎಂಬ ಪರಿಕಲ್ಪನೆ ಹೊಂದಿದೆ.

ರಾಮ್​ ಕಿಟ್​ ಅನ್ನು ಪ್ರಯಾಗ್​ರಾಜ್​ ಜಿಲ್ಲೆಯ ಸುಮಾರು 5 ಸಾವಿರ ಕುಟುಂಬಗಳಿಗೆ ಕಂಟೋನ್ಮೆಂಟ್​ ಆಸ್ಪತ್ರೆಯ ಅಧಿಕಾರಿ ನೀಡಲಿದ್ದಾರೆ. ಈ ರೀತಿಯ ಕಿಟ್​ ನೀಡುತ್ತಿರುವ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಕೂಡ ಈ ಆಸ್ಪತ್ರೆ ಪಾತ್ರವಾಗಿದೆ. 'ರಾಮ್​ ಕಿಟ್'​ನಲ್ಲಿ ಇಕೋಸ್ಪಿನ್​ (ರಕ್ತ ತೆಳುಗೊಳಿಸುವ), ರೋಸುವಾಸ್ಟಾಟಿನ್​ (ಕೊಲೆಸ್ಟ್ರಾಲ್​ ನಿಯಂತ್ರಣ) ಮತ್ತು ಸೋರ್ಬಿಟ್ರೇಟ್​​ (ಹೃದಯದ ಉತ್ತಮ ಕಾರ್ಯಾಚರಣೆ) ಔಷಧಗಳನ್ನು ಇದು ಹೊಂದಿದೆ. ಈ ಔಷಧಗಳು ಹೃದಯದ ಸಮಸ್ಯೆ ಹೊಂದಿರುವವರಿಗೆ ತಕ್ಷಣದ ಪರಿಹಾರ ನೀಡುತ್ತದೆ. ಚಳಿಗಾಲದಲ್ಲಿ ಹೃದ್ರೋಗ ಮತ್ತು ಮಿದುಳಿನ ಪಾರ್ಶ್ವವಾಯು ಪ್ರಕರಣ ಹೆಚ್ಚುವ ಹಿನ್ನೆಲೆಯಲ್ಲಿ ರಾಮ್​ ಕಿಟ್​ ಪ್ರತಿಯೊಬ್ಬರಿಗೂ ಉಪಯೋಗವಾಗಲಿದೆ. ರೋಗಿಯ ಗೋಲ್ಡನ್​ ಅವರ್​ನಲ್ಲಿ ಜೀವ ಉಳಿಸಲು ಸಹಾಯ ಮಾಡುತ್ತದೆ ಎಂದು ಕಂಟೋನ್ಮೆಂಟ್​ ಆಸ್ಪತ್ರೆಯ ನಿರ್ದೇಶಕ ಡಾ.ಎಸ್​.ಕೆ.ಪಾಂಡೆ ತಿಳಿಸಿದ್ದಾರೆ.

ರಾಮನ ಮೇಲೆ ನಂಬಿಕೆಯೇ ಇದಕ್ಕೆ ರಾಮ್‌ ಕಿಟ್‌ ಎಂದು ಹೆಸರಿಡಲು ಕಾರಣ ಎಂದು ಕಾನ್ಪುರದ ಲಕ್ಷ್ಮೀಪತ್​ ಸಿಂಘಾನಿಯಾ ಇನ್ಸಿಟಿಟ್ಯೂಟ್​​ ಆಫ್​ ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್​ ಸರ್ಜರಿಯ ಹಿರಿಯ ಹೃದ್ರೋಗ ತಜ್ಞ ಡಾ.ನೀರಾಜ್​ ಕುಮಾರ್​ ಹೇಳಿದ್ದಾರೆ. ಈ ಕಿಟ್​ನಲ್ಲಿ ಜೀವ ಉಳಿಸುವ ಔಷಧಗಳಿವೆ. ರಕ್ತವನ್ನು ತೆಳು ಮಾಡಲು, ಹೃದಯ ನಾಳದಲ್ಲಿರುವ ಬ್ಲಾಕೇಜ್​ ತೆರೆಯಲು ಮತ್ತು ಹೃದಯ ರೋಗಿಗಳಿಗೆ ತಕ್ಷಣ ಪರಿಹಾರ ನೀಡುತ್ತದೆ. ಜೀವ ಉಳಿಸುವ ಈ ಕಿಟ್​​ಗೆ ಇದಕ್ಕಿಂತ ಉತ್ತಮ ಹೆಸರು ಯಾವುದು? ಎಂದರು.

ಬಡವರನ್ನು ಗಮನದಲ್ಲಿರಿಸಿಕೊಂಡು ಕೇವಲ 7 ರೂ.ಗೆ ಈ ಕಿಟ್​ ಅಭಿವೃದ್ಧಿಪಡಿಸಲಾಗಿದೆ. ಈ ಕಿಟ್​ ಇದೆ ಎಂದ ಮಾತ್ರಕ್ಕೆ ಜನರು ಇದೊಂದಿದ್ದರೆ ಸಾಕು ಎಂದು ತೀವ್ರತರದ ಎದೆನೋವು ಹಾಗು ಇತರೆ ನೋವನ್ನು ನಿರ್ಲಕ್ಷಿಸದೇ ಮನೆಯಲ್ಲಿಯೇ ಇರಬಾರದು ಎಂದು ಅವರು ಸಲಹೆ ನೀಡಿದರು. (ಐಎಎನ್​ಎಸ್​)

ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅಡ್ವಾಣಿ: ವಿಹೆಚ್‌ಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.