ETV Bharat / sukhibhava

Rainy Season: ಮಳೆಗಾಲದಲ್ಲಿ ಆರೋಗ್ಯವಾಗಿರಲು ತಜ್ಞರ ಸಲಹೆಗಳಿವು..

author img

By

Published : Jun 23, 2023, 5:01 PM IST

Updated : Jun 23, 2023, 5:13 PM IST

ಮಳೆಗಾಲದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಕಾಪಾಡುವುದರ ಜೊತೆಗೆ ಆರೋಗ್ಯಕರ ಆಹಾರ ಪದ್ದತಿಯನ್ನು ರೂಢಿಸಿಕೊಂಡು ಫಿಟ್​ ಆಗಿರಬೇಕು ಎನ್ನುತ್ತಾರೆ ವೈದ್ಯರು.

Expert Tips to Stay Healthy in Rainy Season!
Expert Tips to Stay Healthy in Rainy Season!

ಮಳೆಗಾಲ ಆರಂಭವಾಗುತ್ತಿದ್ದಂತೆ ಆರೋಗ್ಯ ಸಮಸ್ಯೆ ಮತ್ತು ಬಾಯಿ ಚಪ್ಪರಿಸುವ ತಿಂಡಿಗಳ ಬಯಕೆಗಳು ಉಲ್ಬಣಗೊಳ್ಳುತ್ತದೆ. ಈ ಸಂದರ್ಭದಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಆರೋಗ್ಯದ ಜೊತೆಯ ಯಾವುದೇ ರಾಜಿ ಮಾಡುವುದು ಸರಿಯಲ್ಲ. ಮಳೆಗಾಲದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ ಆರೋಗ್ಯಕರ ಆಹಾರ ಪದ್ದತಿಯನ್ನು ರೂಢಿಸಿಕೊಂಡು ಫಿಟ್​ ಆಗಿರಬೇಕು ಎನ್ನುತ್ತಾರೆ ವೈದ್ಯರು. ಈ ಸಂಬಂಧ ವೈದ್ಯೆ ಮತ್ತು ಪ್ರಮಾಣೀಕೃತ ಪೋಷಕಾಂಶ ತಜ್ಞೆಯಾಗಿರುವ ಡಾ. ರೋಹಿಣಿ ಪಾಟೀಲ್​ ಸಲಹೆ ನೀಡಿದ್ದಾರೆ.

ಹೈಡ್ರೇಷನ್​: ಮಳೆಗಾಲವಾದರೂ ಈ ಸಮಯದಲ್ಲಿ ಅತಿ ಹೆಚ್ಚು ನೀರು ಕಡಿಯಬೇಕು. ವಾತಾವರಣ ತಂಬಿದ್ದರೂ ನಮ್ಮ ದೇಹ ನಿರ್ಜಲೀಕರಣಗೊಳ್ಳುತ್ತದೆ. ಮಳೆಗಾಲ ಅನೇಕ ವೇಳೆ ಹೆಚ್ಚು ಶುಷ್ಕತೆಯಿಂದ ಕೂಡಿರುತ್ತದೆ. ಇದರಿಂದಾಗಿ ಬೆವರುವಿಕೆ ಮತ್ತು ನೀರಿನಾಂಶ ನಷ್ಟವಾಗಬಹುದು. ದಿನಕ್ಕೆ ಕನಿಷ್ಟ 8 ಲೋಟ ನೀರು ಕುಡಿಯುವುದು ಅವಶ್ಯಕ.

ಬಿಸಿ ಪಾನೀಯ: ಈ ಸಮಯದಲ್ಲಿ ಹರ್ಬಲ್​ ಟೀ, ಸೂಪ್​ ಮತ್ತು ಶುಂಠಿಯಾಧಾರಿತ ಬಿಸಿ ಪಾನೀಯ ಉತ್ತಮವಾಗಿರುತ್ತದೆ. ಇದು ದೇಹವನ್ನು ಬೆಚ್ಚಗಿಡುವ ಜೊತೆಗೆ ಆರೋಗ್ಯಕ್ಕೂ ಪ್ರಯೋಜನ ನೀಡುತ್ತದೆ. ಹರ್ಬಲ್​ ಟೀ, ಗ್ರೀನ್​ ಟೀಯಂತಹ ಚಹಾಗಳು ಆ್ಯಂಟಿಆಕ್ಸಿಡೆಂಟ್​ ನೀಡಿ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ವಿಶೇಷವಾಗಿ ಸಸ್ಯಾಧಾರಿತ ಸೂಪ್​ಗಳು ಪೋಷಕಾಂಶವನ್ನು ನೀಡುತ್ತದೆ.

ಋತುಮಾನದ ಹಣ್ಣುಗಳು: ಈ ಸಮಯದಲ್ಲಿ ಅನೇಕ ಹಣ್ಣುಗಳು ಲಭ್ಯವಿದ್ದು, ಅದರ ರುಚಿ ಸವಿಯಬಹುದು. ಸೇಬು, ಪಿಯರ್​, ದಾಳಿಂಬೆ ಮತ್ತು ಕಿತ್ತಳೆಯಲ್ಲಿ ಸಮೃದ್ಧ ವಿಟಮಿನ್​ ಮತ್ತು ಮಿನರಲ್ಸ್​ ಇದ್ದು ಆ್ಯಂಟಿ ಆಕ್ಸಿಡೆಂಟ್​ ಗುಣ ಹೊಂದಿದೆ. ಈ ಹಣ್ಣುಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಸೋಂಕಿನ ವಿರುದ್ಧ ಹೋರಾಡಿ, ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ವಿಟಮಿನ್​ ಸಿ ಸಮೃದ್ಧ ಆಹಾರ: ನಿಂಬೆ, ಕಿತ್ತಳೆ, ದ್ರಾಕ್ಷಿಹಣ್ಣುಗಳಲ್ಲಿ ಯಥೇಚ್ಛವಾಗಿ ವಿಟಮಿನ್​ ಸಿ ಇರುತ್ತದೆ. ಕಿವಿ, ಬೆಲ್​ ಪೆಪ್ಪರ್​ ಮತ್ತು ಬ್ರಾಕೋಲಿಗಳಲ್ಲಿ ಅತ್ಯುತ್ತಮ ಪೋಷಕಾಂಶಗಳಿದೆ. ವಿಟಮಿನ್​ ಸಿ ಬಿಳಿ ರಕ್ತಕೋಶವನ್ನು ಉತ್ಪತ್ತಿ ಮಾಡುತ್ತದೆ. ಇದು ಸೋಂಕಿನ ವಿರುದ್ಧ ಹೋರಾಡಲು, ದೇಹದ ರಕ್ಷಣೆ ಹೆಚ್ಚಿಸುತ್ತದೆ.

ಸುಧಾರಿತ, ಸಮತೋಲಿತ ಆಹಾರ: ಧಾನ್ಯ, ತೆಳು ಪ್ರೋಟಿನ್​ ಮತ್ತು ತರಕಾರಿಗಳ ಮಿಶ್ರಣದ ಆಹಾರಗಳ ಸಂಯೋಜನೆ ಆಹಾರಕ್ಕೆ ಲಾಭವಾಗಲಿದೆ. ಇದು ಹೆಚ್ಚಿನ ಪೋಷಕಾಂಶ ನೀಡುವ ಜೊತೆಗೆ ಹೆಚ್ಚು ತಿಂದ ಅಥವಾ ಆಲಸ್ಯದ ಭಾವನೆ ಮೂಡಿಸುವುದಿಲ್ಲ. ಬ್ರೌನ್​ ರೈಸ್​, ಓಟ್ಸ್​​ಗಳು ಶಕ್ತಿಯನ್ನು ನೀಡಿದರೆ, ಚಿಕನ್​, ಮೀನು, ಟೊಫು ಸೇರಿದಂತೆ ಮತ್ತಿತ್ತರವೂ ಪ್ರೋಟಿನ್​ ಒದಗಿಸುತ್ತದೆ. ತರಕಾರಿಗಳು ಅಗತ್ಯ ವಿಟಮಿನ್​, ಮಿನರಲ್ಸ್​ ಒದಗಿಸುತ್ತದೆ.

ಪ್ರೊಬಯಾಟಿಕ್ಸ್​​: ಪ್ರೊಬಯೋಟಿಸ್ಸ್​​ ಸಮೃದ್ದ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಉತ್ತಮ. ಯೋಗರ್ಟ್​​, ಕೆಫೀರ್​, ಹುದುಗಿಸಿದ ತರಕಾರಿಗಳು ಆರೋಗ್ಯಕ್ಕೆ ವಿಶೇಷವಾಗಿ ಕರುಳಿಗೆ ಪ್ರಯೋಜನ ನೀಡುತ್ತದೆ. ಇದು ಜೀರ್ಣಾಂಗವ್ಯೂಹದ ಸಮಸ್ಯೆಯಿಂದ ಕಾಪಾಡುತ್ತದೆ.

ಬೆಳ್ಳುಳ್ಳಿ ಮತ್ತು ಈರುಳ್ಳಿ: ಆಹಾರದಲ್ಲಿ ಇವುಗಳನ್ನು ಸೇರಿಸುವುದರಿಂದ ಅವುಗಳು ಸಾಮಾನ್ಯ ಸೋಂಕಿನ ವಿರುದ್ಧ ನಿಮ್ಮನ್ನು ರಕ್ಷಣೆ ಮಾಡುತ್ತದೆ. ವಿಶೇಷವಾಗಿ ಉಸಿರಾಟದ ಸೋಂಕನ್ನು ತಡೆಯುತ್ತದೆ. ಇದು ರುಚಿ ಜೊತೆಗೆ ಪೋಷಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ.

ಬೀದಿಬದಿ ಆಹಾರ ತಪ್ಪಿಸಿ: ಈ ಸಮಯದಲ್ಲಿ ಆಹಾರ ಸಂಬಂಧಿ ಸೋಂಕುಗಳಿಂದ ತಪ್ಪಿಸಿಕೊಳ್ಳಲು ಬೀದಿ ಬದಿಯ ಆಹಾರಗಳನ್ನು ತಪ್ಪಿಸುವುದು ಉತ್ತಮ. ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್​ ಬೆಳವಣಿಗೆ ಹೆಚ್ಚಿರುವುದರಿಂದ ಬೀದಿ ಬದಿ ಆಹಾರ ತಪ್ಪಿಸುವುದು ಉತ್ತಮ. ಇದರ ಬದಲಾಗಿ ಸುರಕ್ಷಿತ, ಸುಲಭವಾಗಿ ಜೀರ್ಣವಾಗುವ ಮನೆ ಆಹಾರಕ್ಕೆ ಆದ್ಯತೆ ನೀಡಿ.

ಸರಿಯಾಗಿ ಆಹಾರ ಶೇಖರಣೆ: ಮಳೆಗಾಲದಲ್ಲಿ ತೇವಾಂಶದಿಂದ ಬಲುಬೇಗ ಆಹಾರ, ಧಾನ್ಯಗಳು ಹಾಳಾಗುತ್ತದೆ. ಈ ಹಿನ್ನಲೆ ಸರಿಯಾದ ಕಂಟೈನರ್​ಗಳಿಂದ ತರಕಾರಿ, ಹಣ್ಣುಗಳನ್ನು, ಆಹಾರಗಳನ್ನು ಸಂರಕ್ಷಿಸಬೇಕಿದೆ. ಇದರಿಂದ ಆಹಾರದ ಗುಣಮಟ್ಟ ಕಾಪಾಡುವ ಜೊತೆಗೆ ಆಹಾರ ಸಂಬಂಧಿ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ತಿನ್ನುವ ಪ್ರೋಟಿನ್​ ಬೆಸ್ಟೇ​ ಅಥವಾ ಕುಡಿಯುವುದಾ; ತಜ್ಞರು ಹೇಳುವುದೇನು?

ಮಳೆಗಾಲ ಆರಂಭವಾಗುತ್ತಿದ್ದಂತೆ ಆರೋಗ್ಯ ಸಮಸ್ಯೆ ಮತ್ತು ಬಾಯಿ ಚಪ್ಪರಿಸುವ ತಿಂಡಿಗಳ ಬಯಕೆಗಳು ಉಲ್ಬಣಗೊಳ್ಳುತ್ತದೆ. ಈ ಸಂದರ್ಭದಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಆರೋಗ್ಯದ ಜೊತೆಯ ಯಾವುದೇ ರಾಜಿ ಮಾಡುವುದು ಸರಿಯಲ್ಲ. ಮಳೆಗಾಲದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ ಆರೋಗ್ಯಕರ ಆಹಾರ ಪದ್ದತಿಯನ್ನು ರೂಢಿಸಿಕೊಂಡು ಫಿಟ್​ ಆಗಿರಬೇಕು ಎನ್ನುತ್ತಾರೆ ವೈದ್ಯರು. ಈ ಸಂಬಂಧ ವೈದ್ಯೆ ಮತ್ತು ಪ್ರಮಾಣೀಕೃತ ಪೋಷಕಾಂಶ ತಜ್ಞೆಯಾಗಿರುವ ಡಾ. ರೋಹಿಣಿ ಪಾಟೀಲ್​ ಸಲಹೆ ನೀಡಿದ್ದಾರೆ.

ಹೈಡ್ರೇಷನ್​: ಮಳೆಗಾಲವಾದರೂ ಈ ಸಮಯದಲ್ಲಿ ಅತಿ ಹೆಚ್ಚು ನೀರು ಕಡಿಯಬೇಕು. ವಾತಾವರಣ ತಂಬಿದ್ದರೂ ನಮ್ಮ ದೇಹ ನಿರ್ಜಲೀಕರಣಗೊಳ್ಳುತ್ತದೆ. ಮಳೆಗಾಲ ಅನೇಕ ವೇಳೆ ಹೆಚ್ಚು ಶುಷ್ಕತೆಯಿಂದ ಕೂಡಿರುತ್ತದೆ. ಇದರಿಂದಾಗಿ ಬೆವರುವಿಕೆ ಮತ್ತು ನೀರಿನಾಂಶ ನಷ್ಟವಾಗಬಹುದು. ದಿನಕ್ಕೆ ಕನಿಷ್ಟ 8 ಲೋಟ ನೀರು ಕುಡಿಯುವುದು ಅವಶ್ಯಕ.

ಬಿಸಿ ಪಾನೀಯ: ಈ ಸಮಯದಲ್ಲಿ ಹರ್ಬಲ್​ ಟೀ, ಸೂಪ್​ ಮತ್ತು ಶುಂಠಿಯಾಧಾರಿತ ಬಿಸಿ ಪಾನೀಯ ಉತ್ತಮವಾಗಿರುತ್ತದೆ. ಇದು ದೇಹವನ್ನು ಬೆಚ್ಚಗಿಡುವ ಜೊತೆಗೆ ಆರೋಗ್ಯಕ್ಕೂ ಪ್ರಯೋಜನ ನೀಡುತ್ತದೆ. ಹರ್ಬಲ್​ ಟೀ, ಗ್ರೀನ್​ ಟೀಯಂತಹ ಚಹಾಗಳು ಆ್ಯಂಟಿಆಕ್ಸಿಡೆಂಟ್​ ನೀಡಿ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ವಿಶೇಷವಾಗಿ ಸಸ್ಯಾಧಾರಿತ ಸೂಪ್​ಗಳು ಪೋಷಕಾಂಶವನ್ನು ನೀಡುತ್ತದೆ.

ಋತುಮಾನದ ಹಣ್ಣುಗಳು: ಈ ಸಮಯದಲ್ಲಿ ಅನೇಕ ಹಣ್ಣುಗಳು ಲಭ್ಯವಿದ್ದು, ಅದರ ರುಚಿ ಸವಿಯಬಹುದು. ಸೇಬು, ಪಿಯರ್​, ದಾಳಿಂಬೆ ಮತ್ತು ಕಿತ್ತಳೆಯಲ್ಲಿ ಸಮೃದ್ಧ ವಿಟಮಿನ್​ ಮತ್ತು ಮಿನರಲ್ಸ್​ ಇದ್ದು ಆ್ಯಂಟಿ ಆಕ್ಸಿಡೆಂಟ್​ ಗುಣ ಹೊಂದಿದೆ. ಈ ಹಣ್ಣುಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಸೋಂಕಿನ ವಿರುದ್ಧ ಹೋರಾಡಿ, ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ವಿಟಮಿನ್​ ಸಿ ಸಮೃದ್ಧ ಆಹಾರ: ನಿಂಬೆ, ಕಿತ್ತಳೆ, ದ್ರಾಕ್ಷಿಹಣ್ಣುಗಳಲ್ಲಿ ಯಥೇಚ್ಛವಾಗಿ ವಿಟಮಿನ್​ ಸಿ ಇರುತ್ತದೆ. ಕಿವಿ, ಬೆಲ್​ ಪೆಪ್ಪರ್​ ಮತ್ತು ಬ್ರಾಕೋಲಿಗಳಲ್ಲಿ ಅತ್ಯುತ್ತಮ ಪೋಷಕಾಂಶಗಳಿದೆ. ವಿಟಮಿನ್​ ಸಿ ಬಿಳಿ ರಕ್ತಕೋಶವನ್ನು ಉತ್ಪತ್ತಿ ಮಾಡುತ್ತದೆ. ಇದು ಸೋಂಕಿನ ವಿರುದ್ಧ ಹೋರಾಡಲು, ದೇಹದ ರಕ್ಷಣೆ ಹೆಚ್ಚಿಸುತ್ತದೆ.

ಸುಧಾರಿತ, ಸಮತೋಲಿತ ಆಹಾರ: ಧಾನ್ಯ, ತೆಳು ಪ್ರೋಟಿನ್​ ಮತ್ತು ತರಕಾರಿಗಳ ಮಿಶ್ರಣದ ಆಹಾರಗಳ ಸಂಯೋಜನೆ ಆಹಾರಕ್ಕೆ ಲಾಭವಾಗಲಿದೆ. ಇದು ಹೆಚ್ಚಿನ ಪೋಷಕಾಂಶ ನೀಡುವ ಜೊತೆಗೆ ಹೆಚ್ಚು ತಿಂದ ಅಥವಾ ಆಲಸ್ಯದ ಭಾವನೆ ಮೂಡಿಸುವುದಿಲ್ಲ. ಬ್ರೌನ್​ ರೈಸ್​, ಓಟ್ಸ್​​ಗಳು ಶಕ್ತಿಯನ್ನು ನೀಡಿದರೆ, ಚಿಕನ್​, ಮೀನು, ಟೊಫು ಸೇರಿದಂತೆ ಮತ್ತಿತ್ತರವೂ ಪ್ರೋಟಿನ್​ ಒದಗಿಸುತ್ತದೆ. ತರಕಾರಿಗಳು ಅಗತ್ಯ ವಿಟಮಿನ್​, ಮಿನರಲ್ಸ್​ ಒದಗಿಸುತ್ತದೆ.

ಪ್ರೊಬಯಾಟಿಕ್ಸ್​​: ಪ್ರೊಬಯೋಟಿಸ್ಸ್​​ ಸಮೃದ್ದ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಉತ್ತಮ. ಯೋಗರ್ಟ್​​, ಕೆಫೀರ್​, ಹುದುಗಿಸಿದ ತರಕಾರಿಗಳು ಆರೋಗ್ಯಕ್ಕೆ ವಿಶೇಷವಾಗಿ ಕರುಳಿಗೆ ಪ್ರಯೋಜನ ನೀಡುತ್ತದೆ. ಇದು ಜೀರ್ಣಾಂಗವ್ಯೂಹದ ಸಮಸ್ಯೆಯಿಂದ ಕಾಪಾಡುತ್ತದೆ.

ಬೆಳ್ಳುಳ್ಳಿ ಮತ್ತು ಈರುಳ್ಳಿ: ಆಹಾರದಲ್ಲಿ ಇವುಗಳನ್ನು ಸೇರಿಸುವುದರಿಂದ ಅವುಗಳು ಸಾಮಾನ್ಯ ಸೋಂಕಿನ ವಿರುದ್ಧ ನಿಮ್ಮನ್ನು ರಕ್ಷಣೆ ಮಾಡುತ್ತದೆ. ವಿಶೇಷವಾಗಿ ಉಸಿರಾಟದ ಸೋಂಕನ್ನು ತಡೆಯುತ್ತದೆ. ಇದು ರುಚಿ ಜೊತೆಗೆ ಪೋಷಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ.

ಬೀದಿಬದಿ ಆಹಾರ ತಪ್ಪಿಸಿ: ಈ ಸಮಯದಲ್ಲಿ ಆಹಾರ ಸಂಬಂಧಿ ಸೋಂಕುಗಳಿಂದ ತಪ್ಪಿಸಿಕೊಳ್ಳಲು ಬೀದಿ ಬದಿಯ ಆಹಾರಗಳನ್ನು ತಪ್ಪಿಸುವುದು ಉತ್ತಮ. ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್​ ಬೆಳವಣಿಗೆ ಹೆಚ್ಚಿರುವುದರಿಂದ ಬೀದಿ ಬದಿ ಆಹಾರ ತಪ್ಪಿಸುವುದು ಉತ್ತಮ. ಇದರ ಬದಲಾಗಿ ಸುರಕ್ಷಿತ, ಸುಲಭವಾಗಿ ಜೀರ್ಣವಾಗುವ ಮನೆ ಆಹಾರಕ್ಕೆ ಆದ್ಯತೆ ನೀಡಿ.

ಸರಿಯಾಗಿ ಆಹಾರ ಶೇಖರಣೆ: ಮಳೆಗಾಲದಲ್ಲಿ ತೇವಾಂಶದಿಂದ ಬಲುಬೇಗ ಆಹಾರ, ಧಾನ್ಯಗಳು ಹಾಳಾಗುತ್ತದೆ. ಈ ಹಿನ್ನಲೆ ಸರಿಯಾದ ಕಂಟೈನರ್​ಗಳಿಂದ ತರಕಾರಿ, ಹಣ್ಣುಗಳನ್ನು, ಆಹಾರಗಳನ್ನು ಸಂರಕ್ಷಿಸಬೇಕಿದೆ. ಇದರಿಂದ ಆಹಾರದ ಗುಣಮಟ್ಟ ಕಾಪಾಡುವ ಜೊತೆಗೆ ಆಹಾರ ಸಂಬಂಧಿ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ತಿನ್ನುವ ಪ್ರೋಟಿನ್​ ಬೆಸ್ಟೇ​ ಅಥವಾ ಕುಡಿಯುವುದಾ; ತಜ್ಞರು ಹೇಳುವುದೇನು?

Last Updated : Jun 23, 2023, 5:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.