ETV Bharat / state

'ಬಂಗಾರದ ಮನುಷ್ಯ'ನಾಗಿಸಿದ ಕೊರೊನಾ.. ಕಂಪನಿಯ ಈವೆಂಟ್​ ಮ್ಯಾನೇಜರ್‌ ಇಂದು ರೈತ!!

author img

By

Published : Jun 20, 2020, 6:46 PM IST

ಕೊರೊನಾ ಜನರಲ್ಲಿ ಭೀತಿ ಹುಟ್ಟಿಸುವುದು ಮಾತ್ರ ಅಲ್ಲದೇ ಬಡ ಕಾರ್ಮಿಕರ ಅನ್ನಕ್ಕೆ ಕನ್ನ ಹಾಕಿದೆ. ಪಟ್ಟಣಗಳಲ್ಲಿದ್ದ ಅದೆಷ್ಟೋ ಮಂದಿ ಹೆಮ್ಮಾರಿ ವೈರಸ್​​ನಿಂದ ಕೆಲಸ ಕಳೆದುಕೊಂಡು ಈಗ ತಮ್ಮ ಹಳ್ಳಿಗಳಿಗೆ ತೆರಳಿ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಆದರೆ, ಇಲ್ಲೊಬ್ಬ ಯುವಕ ಅವರೆಲ್ಲರಿಗೂ ಮಾದರಿ..

The event manager at the company is now a farmer
ಕಂಪನಿಯಲ್ಲಿ ಈವೆಂಟ್​ ಮ್ಯಾನೇಜರ್​​ ಆಗಿದ್ದವ ಇಂದು ರೈತನಾದ

ಯಾದಗಿರಿ : ಯಾದಗಿರಿಯ ಗುರಮಿಠಕಲ್ ತಾಲೂಕಿನ ಇಡ್ಲೂರ ಗ್ರಾಮದ ಮೌನೇಶ್ ಎಂಬಾತ​ ಹೈದರಾಬಾದ್​​ನ ಖಾಸಗಿ ಕಂಪನಿಯೊಂದರಲ್ಲಿ ಈವೆಂಟ್​ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಕೊರೊನಾ ವೈರಸ್​ ವಕ್ಕರಿಸಿದ್ಮೇಲೆ ಲಾಕ್​ಡೌನ್​ ಘೋಷಣೆಯಾದ್ಮೇಲೆ ಎಲ್ಲರಂತೆ ಈತನೂ ಕೂಡಾ ತನ್ನ ಗ್ರಾಮಕ್ಕೆ ವಾಪಸ್​ ಬಂದ. ಇದ್ದ ಕೆಲಸವೂ ಹೋಯ್ತು.. ಇದರಿಂದ ಧೃತಿಗೆಡದ ಮೌನೇಶ್​ ಗ್ರಾಮದ ಹೊರಭಾಗದಲ್ಲಿ ಐದು ಎಕರೆ ಭೂಮಿಯನ್ನು ಲೀಸ್​ಗೆ ಪಡ್ಕೊಂಡು ವ್ಯವಸಾಯ ಆರಂಭಿಸಿದ್ದಾರೆ.

ಬಂಗಾರದ ಮನುಷ್ಯ.. ಕೃಷಿಕನಾದ ಖಾಸಗಿ ಕಂಪನಿಯೊಂದರ ಉದ್ಯೋಗಿ..

ಹೈದರಾಬಾದ್​ನಲ್ಲಿ ಕೈತುಂಬಾ ಸಂಬಳ ಪಡೀತಿದ್ದ ಮೌನೇಶ್​ ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದರು. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಕಂಪನಿ ಮುಚ್ಚಿದಾಗ ದಿಕ್ಕು ತೋಚದ ಮೌನೇಶ್​, ದುಡಿಯೋ ಹುಮ್ಮಸ್ಸಿನಲ್ಲಿ 5 ಎಕರೆ ಜಮೀನು ಲೀಸ್ ಪಡೆದು ಹತ್ತಿ ಬೆಳೆಯಲು ಮುಂದಾಗಿದ್ದಾರೆ. ಈತನ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಾದಗಿರಿ : ಯಾದಗಿರಿಯ ಗುರಮಿಠಕಲ್ ತಾಲೂಕಿನ ಇಡ್ಲೂರ ಗ್ರಾಮದ ಮೌನೇಶ್ ಎಂಬಾತ​ ಹೈದರಾಬಾದ್​​ನ ಖಾಸಗಿ ಕಂಪನಿಯೊಂದರಲ್ಲಿ ಈವೆಂಟ್​ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಕೊರೊನಾ ವೈರಸ್​ ವಕ್ಕರಿಸಿದ್ಮೇಲೆ ಲಾಕ್​ಡೌನ್​ ಘೋಷಣೆಯಾದ್ಮೇಲೆ ಎಲ್ಲರಂತೆ ಈತನೂ ಕೂಡಾ ತನ್ನ ಗ್ರಾಮಕ್ಕೆ ವಾಪಸ್​ ಬಂದ. ಇದ್ದ ಕೆಲಸವೂ ಹೋಯ್ತು.. ಇದರಿಂದ ಧೃತಿಗೆಡದ ಮೌನೇಶ್​ ಗ್ರಾಮದ ಹೊರಭಾಗದಲ್ಲಿ ಐದು ಎಕರೆ ಭೂಮಿಯನ್ನು ಲೀಸ್​ಗೆ ಪಡ್ಕೊಂಡು ವ್ಯವಸಾಯ ಆರಂಭಿಸಿದ್ದಾರೆ.

ಬಂಗಾರದ ಮನುಷ್ಯ.. ಕೃಷಿಕನಾದ ಖಾಸಗಿ ಕಂಪನಿಯೊಂದರ ಉದ್ಯೋಗಿ..

ಹೈದರಾಬಾದ್​ನಲ್ಲಿ ಕೈತುಂಬಾ ಸಂಬಳ ಪಡೀತಿದ್ದ ಮೌನೇಶ್​ ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದರು. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಕಂಪನಿ ಮುಚ್ಚಿದಾಗ ದಿಕ್ಕು ತೋಚದ ಮೌನೇಶ್​, ದುಡಿಯೋ ಹುಮ್ಮಸ್ಸಿನಲ್ಲಿ 5 ಎಕರೆ ಜಮೀನು ಲೀಸ್ ಪಡೆದು ಹತ್ತಿ ಬೆಳೆಯಲು ಮುಂದಾಗಿದ್ದಾರೆ. ಈತನ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.