ETV Bharat / state

ಲಾಕ್​​ಡೌನ್ ಎಫೆಕ್ಟ್​: 2 ಎಕರೆಯಲ್ಲಿ ಬೆಳೆದಿದ್ದ ನುಗ್ಗೇಕಾಯಿ ಹಾಳು

ಬೆಳೆದ ಬೆಳೆಗೆ ಸೂಕ್ತ ದರದಲ್ಲಿ ಖರೀದಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಅಧಿಕಾರಿಗಳು ಮುಂದಾಬೇಕು ಎಂದು ರೈತ ರಾಘವೇಂದ್ರ ಆಗ್ರಹಿಸಿದ್ದಾರೆ.

author img

By

Published : Apr 2, 2020, 10:15 PM IST

Lockdown effect Destroy the drumstick
ನುಗ್ಗೇಕಾಯಿ ಹಾಳು

ಯಾದಗಿರಿ: ಲಾಕ್​ಡೌನ್​ ಹಿನ್ನೆಲೆ ರೈತನೊಬ್ಬ ಬೆಳೆದ ನುಗ್ಗೇಕಾಯಿ ಮಾರುಕಟ್ಟೆಯಲ್ಲಿ ಕೇಳದಂತಾಗಿದೆ. ಹಾಗಾಗಿ ಬೆಳೆ ಜಮೀನಿನಲ್ಲೇ ಹಾಳಾಗಿದೆ.

ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡಬೆಂಬಳಿ ಗ್ರಾಮದ ಯುವ ರೈತ ರಾಘವೇಂದ್ರ ಐರೆಡ್ಡಿ ತಮ್ಮ 2 ಎಕರೆ ಜಮೀನಿನಲ್ಲಿ ನುಗ್ಗೇಕಾಯಿ ಬಂಪರ್ ಬೆಳೆ ಬೆಳೆದಿದ್ದರು.

ಅದಕ್ಕಾಗಿ ಸಾಲ ಮಾಡಿದ್ದರು. ಉತ್ತಮ ಫಸಲು ಕೈಗೆ ಬಂತು ಅನ್ನೋವಷ್ಟರಲ್ಲಿ ದೇಶದಲ್ಲಿ ಲಾಕ್​ಡೌನ್ ಹೇರಲಾಯಿತು. ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಈ ಬೆಳೆಗಾಗಿ ಒಂದೂವರೆ ಲಕ್ಷ ರೂ. ವೆಚ್ಚ ಮಾಡಿದ್ದರಂತೆ.

ಯಾದಗಿರಿ: ಲಾಕ್​ಡೌನ್​ ಹಿನ್ನೆಲೆ ರೈತನೊಬ್ಬ ಬೆಳೆದ ನುಗ್ಗೇಕಾಯಿ ಮಾರುಕಟ್ಟೆಯಲ್ಲಿ ಕೇಳದಂತಾಗಿದೆ. ಹಾಗಾಗಿ ಬೆಳೆ ಜಮೀನಿನಲ್ಲೇ ಹಾಳಾಗಿದೆ.

ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡಬೆಂಬಳಿ ಗ್ರಾಮದ ಯುವ ರೈತ ರಾಘವೇಂದ್ರ ಐರೆಡ್ಡಿ ತಮ್ಮ 2 ಎಕರೆ ಜಮೀನಿನಲ್ಲಿ ನುಗ್ಗೇಕಾಯಿ ಬಂಪರ್ ಬೆಳೆ ಬೆಳೆದಿದ್ದರು.

ಅದಕ್ಕಾಗಿ ಸಾಲ ಮಾಡಿದ್ದರು. ಉತ್ತಮ ಫಸಲು ಕೈಗೆ ಬಂತು ಅನ್ನೋವಷ್ಟರಲ್ಲಿ ದೇಶದಲ್ಲಿ ಲಾಕ್​ಡೌನ್ ಹೇರಲಾಯಿತು. ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಈ ಬೆಳೆಗಾಗಿ ಒಂದೂವರೆ ಲಕ್ಷ ರೂ. ವೆಚ್ಚ ಮಾಡಿದ್ದರಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.