ETV Bharat / state

ವಿಜಯಪುರ: ಸಿನಿಮೀಯ ಶೈಲಿಯಲ್ಲಿ ಕೊಲೆ.. ಅಟ್ಟಾಡಿಸಿ ಮಹಿಳೆ ಮೇಲೆ ಜೀಪ್​ ಹತ್ತಿಸಿದ ಕಿರಾತಕರು

author img

By

Published : Feb 4, 2022, 10:13 PM IST

Updated : Feb 4, 2022, 10:19 PM IST

ಕಬ್ಬು ಕಟಾವು ಮಾಡಲು ತಂಡವನ್ನು ತರುತ್ತೇವೆ ಎಂದು ಸಾಗರ ಹಾಗೂ ಮಾರುತಿ ಕೊಲೆಯಾದ ಮಹಿಳೆ ಪತಿ ಸೋಮನಿಂಗನಿಂದ 45 ಲಕ್ಷ ರೂ. ಹಣ ಪಡೆದಿದ್ದರು. ಆದರೆ, ಹಣ ಪಡೆದ ಬಳಿಕ ಕಟಾವು ತಂಡವನ್ನ ಕಳುಹಿಸಿರಲಿಲ್ಲ. ಈ ವಿಚಾರಕ್ಕೆ ಸೋಮನಿಂಗ ಹಾಗೂ ಆರೋಪಿಗಳ ನಡುವೆ ವಾಗ್ವಾದ ಆಗಿತ್ತು..

woman murdered in Vijayapura in a cinema style
ಸಿನಿಮೀಯ ಶೈಲಿಯಲ್ಲಿ ಕೊಲೆ

ವಿಜಯಪುರ : ಜಿಲ್ಲೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಕೊಲೆ ನಡೆದಿದೆ. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಬೊಲೆರೋ ಜೀಪ್​​ ಹತ್ತಿಸಿ ಮಹಿಳೆಯನ್ನು ಹತ್ಯೆ ಮಾಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶೋಭಾ ಸೋಮನಿಂಗ ಮೊಗದರೆ (45) ಎಂಬುವರು ಕೊಲೆಯಾದ ಮಹಿಳೆ. ಸಾಗರ ಖತಾರ ಹಾಗೂ ಮಾರುತಿ ಥೋರತ ಎಂಬುವರು ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ತಿಕೋಟಾ ಠಾಣೆ‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಅನ್ಯ ಜಾತಿ ಯುವತಿ ಮದ್ವೆಯಾಗಿದ್ದಕ್ಕೆ ಯುವಕನ ಕುಟುಂಬಕ್ಕೆ ಸ್ವಜಾತಿಯರಿಂದಲೇ ಬಹಿಷ್ಕಾರ.. ಜಿಲ್ಲಾಡಳಿತಕ್ಕೆ ಕುರುಡುತನವೇ!?

ಕಬ್ಬು ಕಟಾವು ಮಾಡಲು ತಂಡವನ್ನು ತರುತ್ತೇವೆ ಎಂದು ಸಾಗರ ಹಾಗೂ ಮಾರುತಿ ಕೊಲೆಯಾದ ಮಹಿಳೆ ಪತಿ ಸೋಮನಿಂಗನಿಂದ 45 ಲಕ್ಷ ರೂ. ಹಣ ಪಡೆದಿದ್ದರು. ಆದರೆ, ಹಣ ಪಡೆದ ಬಳಿಕ ಕಟಾವು ತಂಡವನ್ನ ಕಳುಹಿಸಿರಲಿಲ್ಲ. ಈ ವಿಚಾರಕ್ಕೆ ಸೋಮನಿಂಗ ಹಾಗೂ ಆರೋಪಿಗಳ ನಡುವೆ ವಾಗ್ವಾದ ಆಗಿತ್ತು.

ಈ ವೇಳೆ ಕೊಟ್ಟ ಹಣ ವಾಪಸ್ ಕೊಡುವಂತೆ ಸೋಮನಿಂಗ ಕೇಳಿದ್ದರಿಂದ ಕೆರಳಿದ ಆರೋಪಿಗಳು ಆತ ಇಲ್ಲದ ಸಮಯದಲ್ಲಿ ತೋಟಕ್ಕೆ ಬಂದಿದ್ದರು. ಈ ವೇಳೆ ಜೀಪ್‌ನಿಂದ ಬೆನ್ನಟ್ಟಿ ಅಟ್ಟಾಡಿಸಿ ಸೋಮನಿಂಗನ ಪತ್ನಿ ಶೋಭಾ ಮೇಲೆ ಹರಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯಪುರ : ಜಿಲ್ಲೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಕೊಲೆ ನಡೆದಿದೆ. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಬೊಲೆರೋ ಜೀಪ್​​ ಹತ್ತಿಸಿ ಮಹಿಳೆಯನ್ನು ಹತ್ಯೆ ಮಾಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶೋಭಾ ಸೋಮನಿಂಗ ಮೊಗದರೆ (45) ಎಂಬುವರು ಕೊಲೆಯಾದ ಮಹಿಳೆ. ಸಾಗರ ಖತಾರ ಹಾಗೂ ಮಾರುತಿ ಥೋರತ ಎಂಬುವರು ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ತಿಕೋಟಾ ಠಾಣೆ‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಅನ್ಯ ಜಾತಿ ಯುವತಿ ಮದ್ವೆಯಾಗಿದ್ದಕ್ಕೆ ಯುವಕನ ಕುಟುಂಬಕ್ಕೆ ಸ್ವಜಾತಿಯರಿಂದಲೇ ಬಹಿಷ್ಕಾರ.. ಜಿಲ್ಲಾಡಳಿತಕ್ಕೆ ಕುರುಡುತನವೇ!?

ಕಬ್ಬು ಕಟಾವು ಮಾಡಲು ತಂಡವನ್ನು ತರುತ್ತೇವೆ ಎಂದು ಸಾಗರ ಹಾಗೂ ಮಾರುತಿ ಕೊಲೆಯಾದ ಮಹಿಳೆ ಪತಿ ಸೋಮನಿಂಗನಿಂದ 45 ಲಕ್ಷ ರೂ. ಹಣ ಪಡೆದಿದ್ದರು. ಆದರೆ, ಹಣ ಪಡೆದ ಬಳಿಕ ಕಟಾವು ತಂಡವನ್ನ ಕಳುಹಿಸಿರಲಿಲ್ಲ. ಈ ವಿಚಾರಕ್ಕೆ ಸೋಮನಿಂಗ ಹಾಗೂ ಆರೋಪಿಗಳ ನಡುವೆ ವಾಗ್ವಾದ ಆಗಿತ್ತು.

ಈ ವೇಳೆ ಕೊಟ್ಟ ಹಣ ವಾಪಸ್ ಕೊಡುವಂತೆ ಸೋಮನಿಂಗ ಕೇಳಿದ್ದರಿಂದ ಕೆರಳಿದ ಆರೋಪಿಗಳು ಆತ ಇಲ್ಲದ ಸಮಯದಲ್ಲಿ ತೋಟಕ್ಕೆ ಬಂದಿದ್ದರು. ಈ ವೇಳೆ ಜೀಪ್‌ನಿಂದ ಬೆನ್ನಟ್ಟಿ ಅಟ್ಟಾಡಿಸಿ ಸೋಮನಿಂಗನ ಪತ್ನಿ ಶೋಭಾ ಮೇಲೆ ಹರಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Feb 4, 2022, 10:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.